50 ಪೈಸೆಗಾಗಿ ವ್ಯಕ್ತಿಯೊಬ್ಬರಿಗೆ ನೋಟಿಸ್ ನೀಡಿದ ರಾಜಸ್ಥಾನ ಬ್ಯಾಂಕ್!

ರಾಜಸ್ತಾನದ ಜುಂಜುನು ಜಿಲ್ಲೆಯಲ್ಲಿ ಸಾರ್ವಜನಿಕ ಬ್ಯಾಂಕ್ ವೊಂದು  50 ಪೈಸೆ ಮರುಪಾವತಿಸುವಂತೆ  ವ್ಯಕ್ತಿಯೊಬ್ಬರಿಗೆ ನೋಟಿಸ್ ಕಳುಹಿಸಿದೆ
ಜೀತೇಂದ್ರ ಸಿಂಗ್
ಜೀತೇಂದ್ರ ಸಿಂಗ್
Updated on

ಜುಂಜುನು: ರಾಜಸ್ತಾನದ ಜುಂಜುನು ಜಿಲ್ಲೆಯಲ್ಲಿ ಸಾರ್ವಜನಿಕ ಬ್ಯಾಂಕ್ ವೊಂದು  50 ಪೈಸೆ ಮರುಪಾವತಿಸುವಂತೆ  ವ್ಯಕ್ತಿಯೊಬ್ಬರಿಗೆ ನೋಟಿಸ್ ಕಳುಹಿಸಿದೆ. ಆದರೆ, ಈ ನೋಟಿಸ್ ನ್ನು ಸ್ವೀಕರಿಸಲು  ಜೀತೇಂದ್ರ ಸಿಂಗ್ ತಿರಸ್ಕರಿಸಿದ್ದು, ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.

ಜುಂಜುನುವಿನ ಖೇಟ್ರಿಯಲ್ಲಿ ಈ ಪ್ರಕರಣ ನಡೆದಿದ್ದು, ರಾತ್ರಿ ವೇಳೆಯಲ್ಲಿ ಸಿಂಗ್ ಮನೆ ಮೇಲೆ ನೋಟಿಸ್ ಹಾಕಲಾಗಿದ್ದು, ಕಾನೂನು ಕ್ರಮದ ಬೆದರಿಕೆ ಹಾಕಲಾಗಿದೆ. 

ಬೆನ್ನು ಮೂಳೆಯ ಗಾಯದಿಂದ ಬಳಲುತ್ತಿರುವ ಸಿಂಗ್, ಲೋಕ ಅದಾಲತ್ ನಲ್ಲಿ  ಬಾಕಿ ಹಣವನ್ನು ಪಾವತಿಸಿಲ್ಲ, ಆದಾಗ್ಯೂ, ಅವರ ತಂದೆ ವಿನೋಧ್ ಸಿಂಗ್ ಅವರ ಪರವಾಗಿ ಅಲ್ಲಿಗೆ ಹೋದಾಗ ಬ್ಯಾಂಕ್ ಅಧಿಕಾರಿಗಳು ಹಣವನ್ನು ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾರೆ.

50 ಪೈಸೆಗಾಗಿ  ಬ್ಯಾಂಕ್ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದಾರೆ. ಬ್ಯಾಂಕ್ ನಿಂದ ಎನ್ ಒಸಿ ಪಡೆಯಲು ನಮ್ಮ ಕಕ್ಷಿದಾರರು ಠೇವಣಿ ಕಟ್ಟಲು  ಬಂದಿದ್ದಾರೆ. ಆದರೆ, ಅದನ್ನು ಠೇವಣಿಯನ್ನು  ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜೀತೇಂದ್ರ ಸಿಂಗ್  ಪರ ವಕೀಲ ವಿಕ್ರಮ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com