ನವದೆಹಲಿ: ವಿಜಯ ದಿವಸ ಅಂಗವಾಗಿ ಭಾರತೀಯ ಸೈನಿಕರ ಧೈರ್ಯ, ಸಾಹಸಗಳನ್ನು ಕೊಂಡಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತೀಯ ಸೇನಾಪಡೆ ಸೃಷ್ಟಿಸಿದ ಇತಿಹಾಸ ಸುವರ್ಣಾಕ್ಷರಗಳಲ್ಲಿ ಕೆತ್ತಿಡುವಂತಹದ್ದು ಎಂದು ಹೇಳಿದ್ದಾರೆ.
ಭಾರತೀಯ ಸೈನಿಕರ ಧೈರ್ಯ, ಸಾಹಸ, ಶೌರ್ಯಗಳಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು. 1971ರ ಯುದ್ಧದಲ್ಲಿ ಭಾರತೀಯ ಸೇನೆ ಸೃಷ್ಟಿಸಿದ ಇತಿಹಾಸ ಸುವರ್ಣಾಕ್ಷರಗಳಲ್ಲಿ ಅಚ್ಚತ್ತಿ ಉಳಿಯಲಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯವನ್ನು ಮತ್ತು ಬಾಂಗ್ಲಾದೇಶ ವಿಮೋಚನೆಯನ್ನು ನೆನಪಿಸುವ ಸಂದರ್ಭ ಡಿಸೆಂಬರ್ 16 ಆಗಿದ್ದು ಆ ದಿನವನ್ನು ವಿಜಯ ದಿವಸ ಎಂದು ಆಚರಿಸಿಕೊಂಡು ಬರಲಾಗುತ್ತಿದೆ.
Advertisement