ಸ್ಪೈಸ್ ಜೆಟ್ ವಿಮಾನ ಸಿಬ್ಬಂದಿಯಿಂದ ದುರ್ವರ್ತನೆ: ಸಂಸದೆ ಪ್ರಗ್ಯಾ ಠಾಕೂರ್ ದೂರು ದಾಖಲು 

ಸ್ಪೈಸ್ ಜೆಟ್ ವಿಮಾನದಲ್ಲಿ ತಾವು ಕಾಯ್ದಿರಿಸಿದ್ದ ಸೀಟನ್ನು ನೀಡಲಿಲ್ಲ, ವಿಮಾನದ ಸಿಬ್ಬಂದಿಯ ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಸಂಸದೆ ಪ್ರಗ್ಯಾ ಠಾಕೂರ್
ಸಂಸದೆ ಪ್ರಗ್ಯಾ ಠಾಕೂರ್
Updated on

ಭೋಪಾಲ್(ಮಧ್ಯ ಪ್ರದೇಶ): ಸ್ಪೈಸ್ ಜೆಟ್ ವಿಮಾನದಲ್ಲಿ ತಾವು ಕಾಯ್ದಿರಿಸಿದ್ದ ಸೀಟನ್ನು ನೀಡಲಿಲ್ಲ, ವಿಮಾನದ ಸಿಬ್ಬಂದಿಯ ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕರಿಗೆ ದೂರು ನೀಡಿದ್ದಾರೆ.


ವಿಮಾನ ಪ್ರಯಾಣದ ವೇಳೆ ತಮಗಾದ ತೊಂದರೆ ಬಗ್ಗೆ ನಿನ್ನೆ ಅವರು ದೂರು ಸಲ್ಲಿಸಿದ್ದು, ಸ್ಪೈಸ್ ಜೆಟ್ ಸಿಬ್ಬಂದಿಯ ವರ್ತನೆ ಸರಿಯಾಗಿರಲಿಲ್ಲ, ಈ ಹಿಂದೊಮ್ಮೆ ಕೂಡ ತಮಗೆ ಈ ರೀತಿಯಾಗಿತ್ತು, ತಾವು ಕಾಯ್ದಿರಿಸಿದ ಸೀಟು ಸಿಕ್ಕಿರಲಿಲ್ಲ ಎಂದು ಪ್ರಗ್ಯಾ ಠಾಕೂರ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.


ವಿಮಾನ ನಿಲ್ದಾಣ ನಿರ್ದೇಶಕರ ಬಳಿ ಹೋಗಿ ಈ ಸಂಬಂಧ ಲಿಖಿತ ದೂರು ನೀಡಿದ್ದೇನೆ, ರೈಲು,ವಿಮಾನಗಳಿರುವುದು ಜನರ ಸೌಕರ್ಯಕ್ಕೆ, ಸಾರ್ವಜನಿಕ ಪ್ರತಿನಿಧಿಗಳಾಗಿ ಸಾಮಾನ್ಯ ಜನರಿಗೆ ಸಿಗಬೇಕಾದ ಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ, ಸಾಮಾನ್ಯ ಜನರಿಗೂ ಈ ರೀತಿ ಆಗಬಾರದು, ಹೀಗಾಗಿ ದೂರು ನೀಡಿದೆ ಎಂದರು.


ಈ ಸಂಬಂಧ ದೂರು ಸ್ವೀಕರಿಸಿದ್ದು ತನಿಖೆ ನಡೆಸಲಾಗುವುದು, ಸ್ಪೈಸ್ ಜೆಟ್ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗುವುದು ಎಂದು ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕ ಅನಿಲ್ ವಿಕ್ರಮ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com