ದೇಶ
ಮೋದಿ ಮತ್ತೊಮ್ಮೆ ಅಂತ ಮುಲಾಯಂ ಹೇಳಿದ್ದೇಕೆ?: ಇದು ಆಜಂ ಖಾನ್ ಬಹಿರಂಗಪಡಿಸಿದ ಮಾಹಿತಿ
16 ನೇ ಲೋಕಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನದ ಸಂಸತ್ ಕಲಾಪದಲ್ಲಿ ಕೆಲವು ಅಚ್ಚರಿಯ ಘಟನೆಗಳು ನಡೆದಿವೆ. ಪ್ರಧಾನಿ ಮೋದಿ ಪುನರಾಯ್ಕೆ ಕುರಿತಂತೆ ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್ ನೀಡಿರುವ ಹೇಳಿಕೆ ಈ ಪೈಕಿ ಒಂದು.
ನವದೆಹಲಿ: 16 ನೇ ಲೋಕಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನದ ಸಂಸತ್ ಕಲಾಪದಲ್ಲಿ ಕೆಲವು ಅಚ್ಚರಿಯ ಘಟನೆಗಳು ನಡೆದಿವೆ. ಪ್ರಧಾನಿ ಮೋದಿ ಪುನರಾಯ್ಕೆ ಕುರಿತಂತೆ ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್ ನೀಡಿರುವ ಹೇಳಿಕೆ ಈ ಪೈಕಿ ಒಂದು.
ಸಮಾಜವಾದಿ ಪಕ್ಷ ಮೋದಿ ವಿರುದ್ಧದ ಮಹಾಘಟಬಂಧನದ ಜೊತೆ ಗುರುತಿಸಿಕೊಂಡಿದ್ದರೆ. ಇತ್ತ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಸಂಸತ್ ನಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹೇಳಿದ್ದಾರೆ. ರಾಜಕೀಯ ವಲಯದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಈ ಹೇಳಿಕೆಗೆ ಭಾರಿ ಅಚ್ಚರಿ ವ್ಯಕ್ತವಾಗುತ್ತಿದೆ. ಈ ನಡುವೆ ಸಮಾಜವಾದಿ ಪಕ್ಷದ ಮತ್ತೋರ್ವ ಮುಖಂಡ ಆಜಂ ಖಾನ್, ಮುಲಾಯಂ ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತ ಮುಲಾಯಂ ಸಿಂಗ್ ಸ್ವತಃ ಹೇಳಿಲ್ಲ. ಬದಲಾಗಿ ಅದನ್ನು ಬಲವಂತವಾಗಿ ಹೇರಿಕೆ ಮಾಡಿ ಹೇಳಿಸಲಾಗಿದೆ ಎಂದು ಹೇಳಿದ್ದಾರೆ.
ಅದೇನೇ ಇದ್ದರೂ 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಮಹಾಘಟಬಂಧನ ರಚನೆಯಾಗುತ್ತಿರುವ ಸಂದರ್ಭದಲ್ಲೇ ಎಸ್ ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.