ನವಜಾತ ಶಿಶುಗಳ ಜಾತಕವನ್ನು ಆಸ್ಪತ್ರೆಯಲ್ಲೇ ನೀಡುವ ಪ್ರಸ್ತಾವನೆ ಹಂತದಲ್ಲಿದ್ದು, ಸರ್ಕಾರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆ ಜಾರಿಯಾಗಿದ್ದೇ ಆದಲ್ಲಿ ಇದು ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ. ಅಂದಹಾಗೆ ಈ ಪ್ರಸ್ತಾವನೆಯನ್ನು ನೀಡಿರುವುದು ರಾಜಸ್ಥಾನ ಸಂಸ್ಕೃತ ಶಿಕ್ಷಣ ಇಲಾಖೆ. ಈ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಜೈಪುರದ ಜಗದ್ಗುರು ರಾಮನಂದಾಚಾರ್ಯ ರಾಜಸ್ಥಾನ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗಿತ್ತು. ರಾಜಸ್ಥಾನಾ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನ ಪ್ರಣಾಳಿಕೆ ಅಂಶಗಳಲ್ಲಿ ಸಂಸ್ಕೃತ ಅಭ್ಯಾಸವನ್ನು ಉತ್ತೇಜಿಸುವುದು, ವೈದಿಕ ಸಂಸ್ಕಾರ ಹಾಗೂ ಶಿಕ್ಷಾ ಬೋರ್ಡ್ ನ್ನು ಸ್ಥಾಪಿಸುವುದೂ ಸಹ ಒಂದಾಗಿತ್ತು. ಈ ಪ್ರಣಾಳಿಕೆ ಅಂಶಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಕ್ಕಳಿಗೆ ಆಸ್ಪತ್ರೆಯಲ್ಲೇ ಜಾತಕ ನೀಡುವ ಯೋಜನೆಯನ್ನೂ ಜಾರಿಗೆ ತರಲಾಗುತ್ತಿದೆ.