ನವದೆಹಲಿ: ಫೆಬ್ರವರಿ 12 ರಂದು ಶಾಲಾ ಬಸ್ ನಿಂದ ಕಿಡ್ನಾಪ್ ಆಗಿದ್ದ ಉದ್ಯಮಿಯೊಬ್ಬರ ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.
ಮದ್ಯಪ್ರದೇಶದ ಚಿತ್ರಕೂಟ್ ನಲ್ಲಿರುವ ಶಾಲಾ ಬಸ್ ಗೆ ನುಗ್ಗಿದ ಬಂದೂರು ಧಾರಿಗಳು ಹಾಡ ಹಗಲಲ್ಲೇ ಅವಳಿ ಮಕ್ಕಳನ್ನು ಕಿಡ್ನಾಪ್ ಮಾಡಿದ್ದರು.
ಕಿಡ್ನಾಪ್ ಮಾಡಿದ ನಂತರ ಆರೋಪಿಗಳು ದೊಡ್ಡ ಮೊತ್ತದ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮಕ್ಕಳ ಶವ ಯಮುನಾ ನದಿ ಯಲ್ಲಿ ಮಕ್ಕಳ ಶವಗಳು ತೇಲುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ,
ಆಯಿಲ್ ವ್ಯಾಪಾರಿ ಬ್ರಿಜೇಷ್ ರಾವತ್ ಎಂಬುವರ ಮಕ್ಕಳಾಗಿದ್ದರು, ಈ ಸಂಬಂಧ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.