ಕುಂಭ ಮೇಳದಲ್ಲಿ ಮೋದಿ ಶಾಹಿ ಸ್ನಾನ: ಮಾಯಾವತಿ ವಾಗ್ದಾಳಿ

ಇತರ ರಾಜ್ಯಗಳ ಕಡೆಗಣನೆ, ವಿಶ್ವಾಸಘಾತುಕತೆ ಹಾಗೂ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದ ಪ್ರಧಾನಿ ಮೋದಿ ಇವುಗಳ ದೋಷದಿಂದ ಮುಕ್ತಿ ಪಡೆಯಲು ತ್ರಿವೇಣಿ ಸಂಗಮದಲ್ಲಿ ಶಾಹಿಸ್ನಾನ ಮಾಡಿದ್ದಾರೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಇತರ ರಾಜ್ಯಗಳ ಕಡೆಗಣನೆ, ವಿಶ್ವಾಸಘಾತುಕತೆ  ಹಾಗೂ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದ  ಪ್ರಧಾನಿ ಮೋದಿ  ಇವುಗಳ ದೋಷದಿಂದ  ಮುಕ್ತಿ ಪಡೆಯಲು ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡಿದ್ದಾರೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ  ವಾಗ್ದಾಳಿ ನಡೆಸಿದ್ದಾರೆ.

ಜಿಎಸ್ ಟಿ, ನೋಟು ಅಮಾನ್ಯತೆ,  ಕೋಮುವಾದ, ಜಾತಿವಾದ, ಪ್ರತಿಕಾರದಿಂದ  ಸರ್ವಾಧಿಕಾರಿಯಂತೆ ಅಧಿಕಾರ ನಡೆಸಿದ ಮೋದಿ ಹಾಗೂ  ಬಿಜೆಪಿಯನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಟ್ವೀಟ್  ಮಾಡಿದ್ದಾರೆ.
 ತಿಂಗಳಿಗೆ 500 ಅಥವಾ ಪ್ರತಿದಿನ 17 ರೂ. ನೀಡುವುದು ಶ್ರಮಜೀವಿ ರೈತರಿಗೆ ಮಾಡಿದ ಅಪಮಾನವಾಗಿದೆ. ಇದು ಬಿಜೆಪಿಯ ಅಪಕ್ವತೆಯ ಚಿಂತನೆಯನ್ನು ತೋರಿಸುತ್ತದೆ ಎಂದು ಮಾಯಾವತಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com