2018ರ ಮೇ ತಿಂಗಳಲ್ಲಿ ತೂತುಕುಡಿ ನಗರದಾದ್ಯಂತ ವೇದಾಂತ ಸ್ಟೆರ್ಲೈಟ್ ಘಟಕದ ವಿರುದ್ಧ ಪ್ರತಿಭಟನೆಗಳು ನಡೆದಿದ್ದು ಈ ವೇಳೆ ಪೋಲೀಸರು ನಡೆಸಿದ್ದ ಗುಂಡಿನ ದಾಳಿಯಿಂದ 13 ಜನ ಸಾವನ್ನಪ್ಪಿದ್ದರು. ಆದರೆ ಎನ್ ಜಿಟಿ ಡಿಸೆಂಬರ್ 15ರಂದು ನೀಡಿದ್ದ ಆದೇಶದಂತೆ ಘಟಕದ ಪುನಾರಂಭಕ್ಕೆ ಯಾವ ಅಡ್ಡಿ ಇಲ್ಲ ಎನ್ನಲಾಗಿದ್ದು ತನ್ನ ಆದೇಶದ ಬಳಿಕ ಮೂರು ವಾರಗಳಲ್ಲಿ ರಾಜ್ಯ ಸರ್ಕಾರ ಘಟಕದ ಪುನಾರಂಭಕ್ಕೆ ಅನುಮತಿ ನೀಡಬೇಕೆಂದು ಹೇಳಿತ್ತು.