ದಿನಮಲಾರ್ ಜೊತೆ ಮಾತನಾಡಿದ ಚೆಕ್ ಪ್ರಜೆ ಮೆರ್ಲಾಸ್ ಅವರು, ಅಯ್ಯಪ್ಪನ ಸ್ಪೂರ್ತಿಯಿಂದ ನಾವು ಕಳೆದ ಐದು ವರ್ಷಗಳಿಂದ ಶಬರಿಮಲೆಗೆ ಆಗಮಿಸುತ್ತಿದ್ದೇವೆ. ಇಲ್ಲಿನ ಪರಿಸ್ಥಿತಿ ಬಗ್ಗೆ ನಮಗೆ ಅರಿವಿದೆ. ದೇವಸ್ಥಾನದ ಸಂಪ್ರದಾಯವನ್ನು ನಾವು ಗೌರವಿಸುತ್ತೇವೆ. ಯಾರಿಗೂ ತೊಂದರೆಯಾಗದಂತೆ ದೇವರ ದರ್ಶನ ಪಡೆದು ನಮ್ಮ ದೇಶಕ್ಕೆ ಮರಳುತ್ತೇವೆ ಎಂದಿದ್ದಾರೆ.