ಬಾಬ್ರಿ ಮಸೀದಿ ಧ್ವಂಸ ಭಾರತವನ್ನು ವಿಭಜಿಸಲು ಎರಡನೇ ಯತ್ನವಾಗಿತ್ತು. ಬಾಬ್ರಿ ಮಸೀದಿ ಧ್ವಂಸಗೊಂಡಾಗ ಹಿಂದೂ-ಮುಸ್ಲಿಮರ ಏಕತೆಗೂ ಧಕ್ಕೆ ಉಂಟಾಯಿತು ಎಂದು ಮಣಿಶಂಕರ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮುಸ್ಲಿಮರ ಸಮಗ್ರತೆಯನ್ನು ಪ್ರಶ್ನಿಸುವುದು ಟ್ರೆಂಡ್ ಆಗಿದೆ. ದೇಶ ವಿಭಜನೆಯಾದಾಗ ನೀವು ಈ ನೆಲಕ್ಕೆ ನಿಷ್ಟೆ ತೋರಿ ಇಲ್ಲೇ ಉಳಿದವರು ನಿಮ್ಮನ್ನು ಪ್ರಶ್ನಿಸುವುದು, ಅನುಮಾನಿಸುವುದೆಂದರೆ ಈ ದೇಶದ ಸಮಗ್ರತೆಯನ್ನೇ ಪ್ರಶ್ನಿಸಿದಂತೆ, ಸಂವಿಧಾನವನ್ನು ಪ್ರಶ್ನಿಸಿದಂತೆ, ನಾನೊಬ್ಬ ಹಿಂದೂ ಹಾಗೂ ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಮಣಿಶಂಕರ್ ಅಯ್ಯರ್ ಸಭಿಕರಿಗೆ ತಿಳಿಸಿದ್ದಾರೆ.