ಶಬರಿಮಲೆಯಲ್ಲಿ ಅಯ್ಯಪ ಮಕರ ಜ್ಯೋತಿ ದರ್ಶನ, ಪುಳಕಗೊಂಡ ಭಕ್ತ ಸಾಗರ

ಕೇರಳ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಇಂದು (ಜನವರಿ 14) ಮಕರಜ್ಯೋತಿ ಕಾಣಿಸಿದೆ. ಅಯ್ಯಪ್ಪನ ಸನ್ನಿಧಾನ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿ ದರ್ಶನವಾಗಿದ್ದು.....
ಶಬರಿಮಲೆಯಲ್ಲಿ ಅಯ್ಯಪ ಮಕರ ಜ್ಯೋತಿ ದರ್ಶನ, ಪುಳಕಗೊಂಡ ಭಕ್ತ ಸಾಗರ
ಶಬರಿಮಲೆಯಲ್ಲಿ ಅಯ್ಯಪ ಮಕರ ಜ್ಯೋತಿ ದರ್ಶನ, ಪುಳಕಗೊಂಡ ಭಕ್ತ ಸಾಗರ
Updated on
ಶಬರಿಮಲೆ: ಕೇರಳ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಇಂದು (ಜನವರಿ 14) ಮಕರಜ್ಯೋತಿ ಕಾಣಿಸಿದೆ. ಅಯ್ಯಪ್ಪನ ಸನ್ನಿಧಾನ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿ ದರ್ಶನವಾಗಿದ್ದು ಸಾವಿರಾರು ಭಕ್ತರು ಜ್ಯೋತಿ ದರ್ಶನ ಪಡೆದು ಪುಳಕಿತರಾಗಿದ್ದಾರೆ.
ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶದಿಂದ ವಿವಾದ ಹಾಗೂ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ಮುನ್ನಾ ದಿನ ಮಕರ ಜ್ಯೋತಿ ದರ್ಶನವಾಗಿದೆ.
ಜ್ಯೋತಿಯ ದರ್ಶನ ಆಗುತ್ತಿದ್ದಂತೆಯೇ ಭಕ್ತರು ಗಟ್ಟಿ ದನಿಯಲ್ಲಿ  “ಸ್ವಾಮಿಯೇ ಶರಣಂ ಅಯ್ಯಪ್ಪ”  ಎಂದು ಜಯಘೋಷಗಳನ್ನು ಮಾಡಿದ್ದಾರೆ.
ದೇಶದ ನಾನಾ ಕಡೆಗಳಿಂದ ಶಬರಿಮಲೆ ಸನ್ನಿಧಾನಕ್ಕೆ ಭಕ್ತರು ಆಗಮಿಸಿದ್ದು ಜ್ಯೋತಿ ದರ್ಶನಕ್ಕೆ ಸಾಖ್ಶಿಯಾಗಿದ್ದರು. ಆದರೆ ವಿವಾದ, ಕ್ಷೋಭೆಗಳ ಕಾರಣದಿಂದ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಇಳಿಮುಖವಾಗಿದ್ದದ್ದು ಕಂಡು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com