ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ

ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಶ್ವ ಹಿಂದೂ ಪರಿಷತ್ ೯ವಿಎಚ್ ಪಿ) ಮಾಜಿ ಅಧ್ಯಕ್ಷ ವಿಷ್ಣು ಹರಿ ದಾಲ್ಮಿಯಾ ಬುಧವಾರ ತಮ್ಮ ನಿವಾಸದ...
ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ
ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ
ನವದೆಹಲಿ: ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ  ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಮಾಜಿ ಅಧ್ಯಕ್ಷ ವಿಷ್ಣು ಹರಿ ದಾಲ್ಮಿಯಾ ಬುಧವಾರ  ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ದಾಲ್ಮಿಯಾ 9.38ಕ್ಕೆ ದೆಹಲಿಯ  ಗಾಲ್ಫ್ ಲಿಂಕ್ಸ್ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ವಿಷ್ಣು ಹರಿ ದಾಲ್ಮಿಯಾ ಅವರು ಇಂದು ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.ಸಂಜೆ ನಿಗಂಬೋಡ್ ಘಾಟ್ ನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವಿಎಚ್ ಪಿಹೇಳಿಕೆಯಲ್ಲಿ ತಿಳಿಸಿದೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ದಾಲ್ಮಿಯಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆ ನಂತರ  ಜನವರಿ 13ರಂದು  ಮತ್ತೆ ಮನೆಗೆ ಹಿಂತಿರುಗಿದ್ದರು.
ದಾಲ್ಮಿಯಾ ಶ್ರೀ ರಾಮಜನ್ಮಭೂಮಿ ನಿವಾಸ್ ನ ಟ್ರಸ್ಟಿಯೂ, ವಿಎಚ್ ಪಿ ಕೇಂದ್ರೀಯ ಮಾರ್ಗದರ್ಶಕ್ ಮಂಡಲ್ ನ ಸದಸ್ಯರೂ ಆಗಿದ್ದರು. ಹಿರಿಯ ವಿಎಚ್ಪಿ ಮುಖಂಡರಾದ ಅಶೋಕ್ ಸಿಂಘಾಲ್ ಮತ್ತು ಗಿರಿರಾಜ್ ಕಿಶೋರ್ ಅವರೊಂದಿಗೆ ರಾಮ್ ಜನ್ಮಭೂಮಿ ಆಂದೋಲನದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ದಾಲ್ಮಿಯಾ ಕೂಡ ಒಬ್ಬರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com