ಬರೆದುಕೊಟ್ಟಿದ್ದ ಭಾಷಣ ಓದಲೂ ಪರದಾಡಿದ 'ಕೈ' ಸರ್ಕಾರದ ನೂತನ ಸಚಿವೆ, ಕಾರಣವೇನು?

ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮಹಿಳಾ ಮತ್ತು ಕಲ್ಯಾಣ ಸಚಿವೆ ಇರ್ಮಾತಿ ದೇವಿ...
ಇರ್ಮಾತಿ ದೇವಿ
ಇರ್ಮಾತಿ ದೇವಿ
Updated on
ಗ್ವಾಲಿಯರ್(ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮಹಿಳಾ ಮತ್ತು ಕಲ್ಯಾಣ ಸಚಿವೆ ಇರ್ಮಾತಿ ದೇವಿ ಅವರುರ ಗಣರಾಜ್ಯೋತ್ಸವದ ಭಾಷಣ ಓದಲಾಗದೆ ಜಿಲ್ಲಾಧಿಕಾರಿಗೆ ಓದಲು ಹೇಳಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಗ್ವಾಲಿಯರ್ ನ ಎಸ್ಎಎಫ್ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವೆ ಇರ್ಮಾತಿ ದೇವಿ ಬದಲಿಗೆ ಜಿಲ್ಲಾಧಿಕಾರಿ ಭರತ್ ಯಾದವ್ ಗಣರಾಜ್ಯೋತ್ಸವದ ಭಾಷಣವನ್ನು ಓದಿದ್ದರು. ಮೊದಲಿಗೆ ಸಚಿವೆ ಭಾಷಣದ ಕೆಲವು ಸಾಲುಗಳನ್ನು ಓದಿದ್ದರು. ನಂತರ ನಿಲ್ಲಿಸಿದ ಅವರು ಜಿಲ್ಲಾಧಿಕಾರಿ ಓದುತ್ತಾರೆ ಎಂದು ಅವರಿಗೆ ಭಾಷಣದ ಪ್ರತಿಯನ್ನು ನೀಡಿದ್ದರು.
ನಂತರ ಪ್ರತಿಕ್ರಿಯೆ ನೀಡಿರುವ ಇರ್ಮಾತಿ ದೇವಿ, ನನಗೆ ಕಳೆದ ಎರಡು ದಿನಗಳಿಂದ ಆರೋಗ್ಯ ಸರಿಯಿಲ್ಲ. ಬೇಕಾದರೆ ನೀವು ವೈದ್ಯರನ್ನು ಕೇಳಿ. ಈಗ ಸ್ವಲ್ಪ ಪರವಾಗಿಲ್ಲ. ಭಾಷಣವನ್ನು ತಪ್ಪಾಗಿ ಓದಬಾರದೆಂದು ನಾನು ಜಿಲ್ಲಾಧಿಕಾರಿ ಭಾಷಣ ಓದಲು ಹೇಳಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com