ದೇಶ ವಿರೋಧಿ ಶಕ್ತಿಗಳು ಶಾಂತಿನಾಶ ಮಾಡುವ ಕೆಲಸ ಮಾಡುತ್ತಿವೆ: ಮೋಹನ್ ಭಾಗ್ವತ್

ದೇಶ ವಿರೋಧಿ ಪಡೆಗಳು ರಾಷ್ಟ್ರದ ಶಾಂತಿ ಹಾಳು ಮಾಡುತ್ತಿವೆ ಎಂದು ರಾಷ್ಚ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ....
ಮೋಹನ್ ಬಾಗ್ವತ್
ಮೋಹನ್ ಬಾಗ್ವತ್
Updated on
ಕಾನ್ಪುರ: ದೇಶ ವಿರೋಧಿ ಪಡೆಗಳು ರಾಷ್ಟ್ರದ ಶಾಂತಿ ಹಾಳು ಮಾಡುತ್ತಿವೆ ಎಂದು ರಾಷ್ಚ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ  ಮೋಹನ್ ಭಾಗ್ವತ್ ಹೇಳಿದ್ದಾರೆ.
ಯಾರದೇ ದುರಾದೃಷ್ಟಕ್ಕಾಗಿ ನಾವು ಪ್ರಾರ್ಥಿಸುವುದಿಲ್ಲ  ಎಲ್ಲರೂ ಸಂತೋಷವಾಗಿರಬೇಕು ಎಂದು ಬಯಸುತ್ತೇವೆ, ಆದರೆ ದೇಶ ವಿರೋಧಿ ಶಕ್ತಿಗಳು ಶಾಂತಿ ನಾಶ ಮಾಡಲು ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ನಡೆದ ಕಾನ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗ್ವತ್, ಇಡಿ ಪ್ರಪಂಚವೇ ಇದರ ನೋವು ಅನುಭವಿಸುತ್ತಿದೆ, ಆದರೆ  ಕೇವಲ ಭಾರತಕ್ಕೆ ಮಾತ್ರ ಅದನ್ನು ಎದುರಿಸುವ ಶಕ್ತಿಯಿದೆ ಎಂದು ಹೇಳಿದ್ದಾರೆ.
ಎಲ್ಲರಿಗೂ ಭಾರತ ವಿಶ್ವಗುರು ವಾಗಲಿದೆ, ಭಾರತದ ಪ್ರತಿಯೊಬ್ಬ ಪ್ರಜೆಯೂ ಉತ್ತಮ ಜೀವನ ನಡೆಸುವಂತಾಗಬೇಕು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com