2019ನೇ ಇಸವಿಯಲ್ಲಿ ಮೊದಲನೆ ಬಾರಿಗೆ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನಲ್ಲಿ ಮಾತನಾಡಿದ ನರೇಂದ್ರ ಮೋದಿ, ಜನವರಿ ತಿಂಗಳಲ್ಲಿ ನಾವು ಒಂದು ಕೆಟ್ಟ ಸುದ್ದಿ ಕೇಳಿದೆವು, ಅದು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ 111 ವರ್ಷ ಸಿದ್ದಗಂಗಾ ಶ್ರಿಗಳು ನಿಧನರಾಗಿದ್ದು, ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ, ಸಾವಿರಾರು ಮಂದಿಗೆ ಶಿಕ್ಷಣ, ಊಟ ವಸತಿ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.