ನಾನು ಹಿಂದೂ ಮಹಿಳೆ ಮೈ ಮುಟ್ಟಿದ್ದೇನೆ, ನನ್ನ ಕೈ ಕಡಿತೀರಾ?: ಅನಂತಕುಮಾರ್ ಹೆಗ್ಡೆಗೆ ತೆಹ್ಸೀನ್ ಸವಾಲು!

ಹಿಂದೂ ಹುಡುಗಿ ಮೈ ಮುಟ್ಟಿದ ಕೈ ಇರಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ತೆಹ್ಸೀನ್ ಪೂನಾವಾಲ ಎಂಬಾತ ಬಹಿರಂಗವಾಗಿ ಸವಾಲು ಹಾಕಿದ್ದಾನೆ.
ಅನಂತ್ ಕುಮಾರ್ ಹೆಗ್ಡೆ-ತೆಹ್ಸೀನ್ ಪೂನಾವಾಲ
ಅನಂತ್ ಕುಮಾರ್ ಹೆಗ್ಡೆ-ತೆಹ್ಸೀನ್ ಪೂನಾವಾಲ
ನವದೆಹಲಿ: ಹಿಂದೂ ಹುಡುಗಿ ಮೈ ಮುಟ್ಟಿದ ಕೈ ಇರಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ತೆಹ್ಸೀನ್ ಪೂನಾವಾಲ ಎಂಬಾತ ಬಹಿರಂಗವಾಗಿ ಸವಾಲು ಹಾಕಿದ್ದಾನೆ. 
ನಾನಾ ನನ್ನ ಹಿಂದೂ ಪತ್ನಿಯ ಮೈಯನ್ನು ಮುಟ್ಟಿದ್ದೇನೆ. ನಿಮ್ಮ ಕೈಯಲ್ಲಿ ಏನು ಮಾಡೋಕೆ ಆಗುತ್ತೆ, ಇದು ಒಂದು ಧೈರ್ಯ ಸರ್! ಎಂದು ತೆಹ್ಸೀನ್ ಪೂನಾವಾಲ ಟ್ವೀಟ್ ಮಾಡಿ ಸವಾಲು ಆಗಿದ್ದಾನೆ. ಇದಕ್ಕೆ ಟ್ವೀಟರಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೆಗಡೆಯವರೇ ಇನ್ನೂ ಕಾಲ ಮಿಂಚಿಲ್ಲ, ಘನ ವ್ಯಕ್ತಿಯಾಗಲು ಪ್ರಯತ್ನಿಸಿ ಎಂದು ಹೇಳಿದ್ದರು. 
ದಿನೇಶ್ ಗುಂಡೂರಾವ್ ಅವರಿಗೆ ಪ್ರತಿಕ್ರಿಯಿಸಿದ್ದ ಅನಂತ್ ಕುಮಾರ್ ಹೆಗ್ಡೆ ಅವರು ನೀವು ಮುಸ್ಲಿಂ ಯುವತಿ ಹಿಂದೆ ಓಡಿ ಹೋಗಿದ್ದೆ ನಿಮ್ಮ ಸಾಧನೆ ಎಂದು ದಿನೇಶ್ ಗೆ ಹೆಗ್ಡೆ ತಿರುಗೇಟು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com