ಜಾರ್ಜ್ ಅಗಲಿಕೆಯ ಸಂದರ್ಭದಲ್ಲಿ ಬಿಜೆಪಿ ನಾಯಕ ಡಾ.ಸುಬ್ರಹ್ಮಣಿಯನ್ ಸ್ವಾಮಿ, ಜಾರ್ಜ್ ಅವರ ಸಾಧನೆಗಳನ್ನು ಸ್ಮರಿಸಿದ್ದು, ಭಾರತಕ್ಕೆ ಸಿಕ್ಕಿದ ಅತ್ಯುತ್ತಮ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಎಂದು ಬಣ್ಣಿಸಿದ್ದಾರೆ. ಸಿಯಾಚಿನ್ ನ್ನು ಯೋಧರಿಗೆ ಜೀವಿಸಲು ಸಾಧ್ಯವಾಗಬಲ್ಲ ಪ್ರದೇಶವನ್ನಾಗಿ ಮಾಡಿದ್ದು ಜಾರ್ಜ್ ಫರ್ನಾಂಡೀಸ್, ಜಾರ್ಜ್ ಆಗಾಗ್ಗೆ ಅಲ್ಲಿಗೆ ಭೇಟಿ ನೀಡಿ ಯೋಧರ ಅಗತ್ಯತೆಗಳನ್ನು ತಿಳಿಯುತ್ತಿದ್ದರು. ಜಾರ್ಜ್ ಗೆ ಯೋಧರ ಬಗ್ಗೆ ಇದ್ದಷ್ಟು ಸಹಾನುಭೂತಿ ಬಹುಶಃ ಮತ್ತೊಬ್ಬ ರಕ್ಷಣಾ ಸಚಿವರಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಸ್ವಾಮಿ ಹೇಳಿದ್ದಾರೆ.