ಭ್ರಷ್ಟ, ಕ್ರೂರಿ ಬಿಜೆಪಿ ಸರ್ಕಾರ: ಎನ್ ಸಿಪಿ ಸೇರಿದ ಶಂಕರ್ ಸಿಂಗ್ ವಾಘೇಲಾ ವಾಗ್ದಾಳಿ

ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಾಘೇಲಾ ಇಂದು ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ-ಎನ್ ಸಿಪಿ ಸೇರ್ಪಡೆಯಾಗಿದ್ದಾರೆ
ಶಂಕರ್ ಸಿಂಗ್ ವಾಘೇಲಾ
ಶಂಕರ್ ಸಿಂಗ್ ವಾಘೇಲಾ
Updated on

ಅಹಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್  ಸಿಂಗ್ ವಾಘೇಲಾ ಇಂದು  ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ-ಎನ್ ಸಿಪಿ ಸೇರ್ಪಡೆಯಾಗಿದ್ದಾರೆ. ಶರದ್ ಪವರ್ ಅವರ ಸಮ್ಮುಖದಲ್ಲಿ ಎನ್ ಸಿಪಿಗೆ ಸೇರ್ಪಡೆಯಾದ ಶಂಕರ್ ಸಿಂಗ್ ವಾಘೇಲಾ, ಭ್ರಷ್ಟ, ಕ್ರೂರಿ ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಗುಜರಾತಿನ ಜನ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗೆ ಏನನ್ನಾದರೂ ಹಿಂದಕ್ಕೆ ಕೊಡಬೇಕು. ಅದಕ್ಕಾಗಿ ಎನ್ ಸಿಪಿಗೆ ಸೇರ್ಪಡೆಯಾಗಿದ್ದು,ಮುಂದಿನ ದಿನಗಳಲ್ಲಿ ಯುಪಿಎ-3ಯಂತೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಹೇಳಿದರು.
ಪ್ರಸ್ತುತದಲ್ಲಿನ ಬಿಜೆಪಿ ಸರ್ಕಾರ ಕ್ರೂರಿ ಹಾಗೂ ಭ್ರಷ್ಟಾಚಾರದಿಂದ ಕೂಡಿದೆ. ಅವರು ಹೇಳುವುದೆಲ್ಲಾ ಸುಳ್ಳು ಹಾಗೂ ಜನರು ಕೂಡಾ ಈ ಸರ್ಕಾರದಿಂದ ಬೇಸತ್ತಿದ್ದಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com