ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಹೈಕಮಿಷನರ್ ಅಜಯ್ ಬಿಸಾರಿಯಾ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಸರ್ಕಾರಿ ಮೂಲಗಳು ಅಜಯ್ ಬಿಸಾರಿಯಾ ಅವರ ಭೇಟಿಯನ್ನು ವಾಡಿಕೆಯ ಸಮಾಲೋಚನೆ ಎಂದು ಹೇಳುತ್ತಿವೆ. ಜು.14 ರಂದು ಭಾರತ-ಪಾಕ್ ಕರ್ತಾರ್ ಪುರ ಕಾರಿಡಾರ್ ಕುರಿತ ತಾಂತ್ರಿಕ ಸಮಾಲೋಚನೆ ನಡೆಸಲಿದ್ದು, ಇದಕ್ಕೂ ಮುನ್ನ ಅಜಯ್ ಬಿಸಾರಿಯಾ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ 26/11 ಪ್ರಕರಣದ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹಾಗೂ ಭಾರತವನ್ನು ಟಾರ್ಗೆಟ್ ಮಾಡುವ ಜೆಯುಡಿ, ಲಷ್ಕರ್ ಉಗ್ರ ಸಂಘಟನೆಗಳ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಭಾರತ ಪಾಕಿಸ್ತಾನ ಉಗ್ರರ ವಿರುದ್ಧ ಪ್ರಕರಣ ದಾಖಲಿಸುತ್ತಿರುವುದು ವಿಶ್ವಾಸಾರ್ಯಯುತವಾಗಿರಬೇಕೆಂದು ಹೇಳಿತ್ತು.