ಗಡಿಯಲ್ಲಿ ಗೋ ಸಾಗಣೆಗೆ ಖತರ್ನಾಕ್ ಪ್ಲಾನ್; ಬೆಚ್ಚಿಬಿದ್ದ ಭಾರತೀಯ ಯೋಧರು, ವಿಡಿಯೋ ವೈರಲ್!

ಗಡಿಯಲ್ಲಿ ಗೋ ಸಾಗಣೆಗೆ ಕಳ್ಳರು ಬಳಸಿದ್ದ ಖತರ್ನಾಕ್ ಪ್ಲಾನ್ ನೋಡಿದ ಭಾರತೀಯ ಯೋಧರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಗಡಿಯಲ್ಲಿ ಗೋ ಸಾಗಣೆಗೆ ಕಳ್ಳರು ಬಳಸಿದ್ದ ಖತರ್ನಾಕ್ ಪ್ಲಾನ್ ನೋಡಿದ ಭಾರತೀಯ ಯೋಧರು ಒಂದು ಕ್ಷಣ ದಿಗ್ಬ್ರಾಂತರಾಗಿದ್ದಾರೆ. 
ಗಡಿಯಲ್ಲಿ ಗೋ ಸಾಗಣೆಯನ್ನು ಹಲವು ಬಾರಿ ಭಾರತೀಯ ಯೋಧರು ತಡೆಯುವಲ್ಲಿ ಸಫಲರಾಗಿದ್ದಾರೆ. ಈ ಭಾರಿ ಅವರಿಗೆ ಆಶ್ಚರ್ಯ ಎದುರಾಗಿತ್ತು. ಬಾಳೆದಿಂಡಿನಲ್ಲಿ ಹಸುಗಳ ತಲೆಯನ್ನು ತೂರಿಸಿ, ಕಾಲುಗಳನ್ನು ಕಟ್ಟಿ, ನದಿಯಲ್ಲಿ ತೆಲಿಬಿಡುವ ಮೂಲಕ ಅಮಾನವೀಯ ಸ್ಥಿತಿಯಲ್ಲಿ ದನಗಳನ್ನು ಬಾಂಗ್ಲಾಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದನ್ನು ಕಂಡ ಯೋಧರು ಗೋವುಗಳನ್ನು ರಕ್ಷಿಸುವಲ್ಲಿ ಯಸಶ್ವಿಯಾಗಿದ್ದಾರೆ.
ಈ ಹಿಂದೆ ಕೇಂದ್ರ ಗೃಹ ಸಚಿವರಾಗಿದ್ದ ವೇಳೆ ರಾಜನಾಥ್ ಸಿಂಗ್ ಅವರು ಬಿಎಸ್ಎಫ್ ಯೋಧರಿಗೆ ಗೋ ಕಳ್ಳರ ವಿರುದ್ಧ ಕ್ರಮಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಬಳಿಕ ಕಳ್ಳ ಸಾಗಾಣೆಕೆಯಲ್ಲಿ ಇಳಿಕೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com