ಇಡುಕಿ: ಕೇರಳದ ನೆದುಂಕಂಡಂ ಠಾಣೆಯ ಪೊಲೀಸರು ಕಸ್ಟಡಿ ವಿಚಾರಣೆಯ ವೇಳೆ ತಮ್ಮ ಖಾಸಗಿ ಭಾಗಗಳಿಗೆ ಮೆಣಸಿನಪುಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೀರುಮೆಡು ಹಣಕಾಸು ವಂಚನೆ ಪ್ರಕರಣ ಮಹಿಳಾ ಆರೋಪಿ ದೂರಿದ್ದಾರೆ.
ಪ್ರಕರಣದ ಎರಡನೇ ಆರೋಪಿಯಾಗಿರುವ ಶಾಲಿನಿ ಎಂಬ ಮಹಿಳೆ, ಕಸ್ಟಡಿಯಲ್ಲಿ ವಿಚಾರಣೆ ವೇಳೆ ಇಬ್ಬರು ಮಹಿಳಾ ಪೊಲೀಸರು ತಮ್ಮ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಾಕಿ ಚಿತ್ರಹಿಂಸೆ ನೀಡಿದರು. ಪ್ರಕರಣದ ಆರೋಪಿ ರಾಜ್ ಕುಮಾರ್ ಅವರನ್ನು ಠಾಣೆಯಲ್ಲಿ ಪೊಲೀಸರು ಗಂಭೀರವಾಗಿ ಥಳಿಸಿದ್ದರು ನಂತರ ಆತ ಪೀರುಮೆಡು ಸಬ್ ಜೈಲಿನಲ್ಲಿ ಮೃತಪಟ್ಟಿದ್ದರು.