ಕಾರವಾನ್ ಮಾನನಷ್ಟ ಮೊಕದ್ದಮೆ ಪ್ರಕರಣ: ಜು.29 ಕ್ಕೆ ವಿವೇಕ್ ದೋವಲ್ ಪಾಟಿ ಸವಾಲು
ಕಾರವಾನ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ವಿವೇಕ್ ದೋವಲ್ ಪಾಟಿ ಸವಾಲನ್ನು ದೆಹಲಿ ಕೋರ್ಟ್ ಜು.29ಕ್ಕೆ ನಿಗದಿಪಡಿಸಿದೆ.
ಕಾರವಾನ್ ಮಾನನಷ್ಟ ಮೊಕದ್ದಮೆ ಪ್ರಕರಣ: ಜು.29 ಕ್ಕೆ ವಿವೇಕ್ ದೋವಲ್ ಪಾಟಿ ಸವಾಲು
ನವದೆಹಲಿ: ಕಾರವಾನ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ವಿವೇಕ್ ದೋವಲ್ ಪಾಟಿ ಸವಾಲನ್ನು ದೆಹಲಿ ಕೋರ್ಟ್ ಜು.29ಕ್ಕೆ ನಿಗದಿಪಡಿಸಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಕ್ರಾಸ್ ಎಕ್ಸಾಮಿನೇಶನ್ ನ್ನು ಜು.29,30,31 ರಂದು ನಡೆಸುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ಜು.10, 11, 12 ರಂದು ನಿಗದಿಪಡಿಸಲಾಗಿತ್ತು.
ಜ.21 ರಂದು ವಿವೇಕ್ ದೋವಲ್ ಕಾರವಾನ್ ಪತ್ರಿಕೆಯ ವರದಿಗಾರ ಕೌಶಲ್ ಸರ್ಫೋಸ್, ಸಂಪಾದಕ ಪರೇಶ್ ನಾಥ್, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.