ಸದನದಲ್ಲಿ ಚರ್ಚೆ ನಡೆಯುವಾಗ ಶಿಸ್ತು ಕಾಪಾಡುವಂತೆ ಸ್ಪೀಕರ್ ಓಂ ಬಿರ್ಲಾಸೂಚಿಸಿದ ಬಳಿಕ, ಮತ್ತೆ ಚರ್ಚೆ ಆರಂಭವಾಯಿತು.ಇದಕ್ಕೂ ಮುನ್ನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಯ್ದೆಯಲ್ಲಿ ಅಂಶಗಳ ಕುರಿತು ಪ್ರಸ್ತಾಪಿಸಿದ ಗೃಹ ಖಾತೆ ರಾಜ್ಯ ಸಚಿವ ಜಿ ಕೃಷ್ಣ ರೆಡ್ಡಿ, ಹೊಸ ಕರಡು ಮಸೂದೆಯು ಎನ್ಐಎಗೆ ಹೆಚ್ಚಿನ ಬಲ ನೀಡಲಿದ್ದು, ಭಯೋತ್ಪಾದನೆ ಹತ್ತಿಕ್ಕಲು ಸಹಕರಿಸುತ್ತದೆ ಎಂದು ಹೇಳಿದರು.