ಜುಲೈ 21 ರಂದು ಮಲಿಕ್ ಭಾಷಣವೊಂದರಲ್ಲಿ, ಭದ್ರತಾ ಪಡೆಗಳ ಮೇಲೆ ಆಕ್ರಮಣ ಮಾಡುವ ಬದಲು ದೇಶ ಮತ್ತು ಅವರ ರಾಜ್ಯವನ್ನು ಲೂಟಿ ಮಾಡಿದವರನ್ನು ಉಗ್ರರು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ್ದರು."ಕಾಶ್ಮೀರದ ಅತಿದೊಡ್ಡ ಕಾಯಿಲೆ ಭ್ರಷ್ಟಾಚಾರ ... ಈ ಯುವಕರು ಬಂದೂಕುಗಳಿಂದ,ಪಿಎಸ್ಒ ಮತ್ತು ಎಸ್ಪಿಒಗಳನ್ನು ಕೊಲ್ಲುತ್ತಿದ್ದಾರೆ, ನೀವು ಅವರನ್ನು ಏಕೆ ಕೊಲ್ಲುತ್ತಿದ್ದೀರಿ? ನಿಮ್ಮ ದೇಶವನ್ನು ಮತ್ತು ಎಲ್ಲಾ ಸಂಪತ್ತನ್ನು ಕಾಶ್ಮೀರದಿಂದ ಲೂಟಿ ಮಾಡಿದವರನ್ನು ಕೊಲ್ಲಲು ನೀವೇಕೆ ಮುಂದಾಗಿಲ್ಲ ಸೇನಾಪಡೆಗಳ ಮೇಲೆ ದಾಳಿ ನಡೆಸಿ ಹತ್ಯೆ ಮಾಡುವುದರಿಂಡ ಏನನ್ನೂ ಸಾಧಿಸಲಾಗುವುದಿಲ್ಲ" ಎಂದಿದ್ದರು.