ಮೂಲಗಳ ಪ್ರಕಾರ, ಪಂಜಾಬ್ ಮಾಜಿ ಸಚಿವ ಸಿಧು ಅವರು ಇತ್ತೀಚಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಮಾಜಿ ಕ್ರಿಕೆಟಿಗನಿಗೆ ದೆಹಲಿ ಕಾಂಗ್ರೆಸ್ ಹೊಣೆ ವಹಿಸುವ ಬಗ್ಗೆ ಚರ್ಚೆಯಾಗಿದೆ. ಅಲ್ಲದೆ ಈ ಕುರಿತು ವಿಚಾರ ಮಾಡಲು ಸಿಧು ಸಮಯ ನೀಡಲಾಗಿತ್ತು. ಇದೀಗ ರಾಷ್ಟ್ರ ರಾಜಧಾನಿಯ ಜವಾಬ್ದಾರಿ ವಹಿಸಿಕೊಳ್ಳಲು ಸಿಧು ಸಿದ್ಧರಾಗಿದ್ದಾರೆ ಎನ್ನಲಾಗಿದೆ.