ನಿತೀಶ್ ಕುಮಾರ್ ಅವರ ಜೆಡಿ(ಯು) ಪಕ್ಷ ಸೇರಬೇಕಾದರೆ ಈ ಒಂದು ಸಣ್ಣ ಕೆಲಸ ಮಾಡಲೇಬೇಕು!

ಜನತಾ ದಳ(ಸಂಯುಕ್ತ) ಪಕ್ಷವನ್ನು ಯಾರಾದರೂ ಸೇರಲು ಬಯಸುತ್ತಿದ್ದರೆ ನೀವೊಂದು ಸಣ್ಣ ಕೆಲಸ ...
ಪಾಟ್ನಾದಲ್ಲಿ ವಿಶ್ವ ಪರಿಸರ ದಿನ ಗಿಡ ನೆಟ್ಟ ಜೆಡಿಯು ಹಿರಿಯ ನಾಯಕ ಆರ್ ಸಿಪಿ ಸಿಂಗ್
ಪಾಟ್ನಾದಲ್ಲಿ ವಿಶ್ವ ಪರಿಸರ ದಿನ ಗಿಡ ನೆಟ್ಟ ಜೆಡಿಯು ಹಿರಿಯ ನಾಯಕ ಆರ್ ಸಿಪಿ ಸಿಂಗ್
Updated on
ಪಾಟ್ನಾ: ಜನತಾ ದಳ(ಸಂಯುಕ್ತ) ಪಕ್ಷವನ್ನು ಯಾರಾದರೂ ಸೇರಲು ಬಯಸುತ್ತಿದ್ದರೆ ನೀವೊಂದು ಸಣ್ಣ ಕೆಲಸ ಮಾಡಬೇಕು. ನಿನ್ನೆ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು, ಈ ದಿನ ಜನರು ಗಿಡ ನೆಡುವಂತೆ, ಪರಿಸರ ರಕ್ಷಣೆ ಮಾಡುವಂತೆ ಜಾಗೃತಿ ಮೂಡಿಸುವುದು, ಕರೆ ನೀಡುವುದು ಇತ್ಯಾದಿ ಮಾಡಲಾಗುತ್ತದೆ. ಅದೇ ರೀತಿ ಬಿಹಾರದ ಜೆಡಿಯು ಪಕ್ಷ ಸೇರಬೇಕೆಂದರೆ ವರ್ಷವಿಡೀ ಗಿಡ ನೆಡಬೇಕು, ಈ ಒಂದು ನಿಯಮ ಪಾಲಿಸಿದರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸದಸ್ಯರಾಗಬಹುದು.
ಜೆಡಿಯುನ ಈ ನಿಯಮದಿಂದಾಗಿ ಕಳೆದ 13 ವರ್ಷಗಳಲ್ಲಿ ಬಿಹಾರದಲ್ಲಿ ಹಸಿರುವಲಯಗಳ ಪ್ರಮಾಣ ಶೇಕಡಾ 6ರಿಂದ ಶೇಕಡಾ 13ಕ್ಕೆ ಏರಿಕೆಯಾಗಿದೆ. ನಮ್ಮ ದೇಶದಲ್ಲಿ ಈ ವಿಶಿಷ್ಟ ಪದ್ದತಿಯನ್ನು ಪಾಲಿಸಿಕೊಂಡು ಬಂದಿರುವ ಏಕೈಕ ಪಕ್ಷ ಜೆಡಿಯು ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com