ನವದೆಹಲಿ: ಪಾಕಿಸ್ತಾನ ಎಫ್-16 ಯುದ್ಧ ವಿಮಾನವಗಳನ್ನು ಹಿಮ್ಮೆಟ್ಟಿಸಲು ಮುಂದಾಗಿ ಆಕಸ್ಮಿಕವಾಗಿ ಅಲ್ಲಿನ ಸೇನೆಯ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇಂದು ವಾಘಾ ಗಡಿ ಮೂಲಕ ಭಾರತಕ್ಕೆ ಮರಳಲಿದ್ದಾರೆ.
ಅಭಿನಂದನ್ ರನ್ನು ಭಾರತಕ್ಕೆ ಹಸ್ತಾಂತರಿಸುವ ಘೋಷಣೆ ಮಾಡಿದ್ದ ಪಾಕ್ ಇಂದು ಬಿಡುಗಡೆಗೆ ಮುಂದಾಗಿದೆ. ಇದೀಗ ದೇಶವೂ ಅವರ ಬರುವಿಕೆಗಾಗಿ ಎದುರು ನೋಡುತ್ತಿದ್ದು ವಾಘಾ ಗಡಿಯಲ್ಲಿ ಸಾಕಷ್ಟು ಜನರು ನೆರೆದಿದ್ದು ಅಭಿನಂದನ್ ರಿಗೆ ಜೈ ಹೋ ಎನ್ನುತ್ತಿದ್ದಾರೆ.
ಶತ್ರು ರಾಷ್ಟ್ರದ ವಶದಲ್ಲಿರುವ ಮಗ ಸುರಕ್ಷಿತವಾಗಿ ಹಿಂದಿರುಗಬೇಕೆಂದು ಕಾತುರದಿಂದ ಕಾಯುತ್ತಿದ್ದ ಅಭಿನಂದನ್ ಪೋಷಕರು ದೆಹಲಿಗೆ ಆಗಮಿಸಿದ್ದಾರೆ. ಅವರು ಚೆನ್ನೈ-ದೆಹಲಿ ವಿಮಾನದೊಳಗೆ ಬರುವ ವೇಳೆ ಒಂದು ಮಹತ್ವದ ಪ್ರಸಂಗವೂ ನಡೆಯಿತು.
ಅಭಿನಂದನ್ ತಂದೆ ಸಿಂಹಕುಟ್ಟಿ ವರ್ತಮಾನ್ ಅವರು ನಿವೃತ್ತ ಏರ್ ಮಾರ್ಷಲ್ ಆಗಿದ್ದರು. ತಾಯಿ ಶೋಭಾ ಹಾಗೂ ಸಿಂಹಕುಟ್ಟಿ ಅವರು ವಿಮಾನದೊಳಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರು ಎದ್ದುನಿಂತು ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.