ಹೈದ್ರಾಬಾದ್: ಭಾರತದ ವಿರುದ್ಧ ಅಣ್ವಸ್ತ್ರ ಹಾಗೂ ಮುಸ್ಲಿಂ ಕಾರ್ಡ್ ಪ್ರಯೋಗಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದು, ಜೈಷ್ - ಇ- ಮೊಹಮ್ಮದ್ ಹಾಗೂ ಲಷ್ಕರ್ - ಇ- ತೊಯ್ಬಾ ಉಗ್ರ ಸಂಘಟನೆಗಳು ರಕ್ಷಸ ಸಂಘಟನೆಗಳು ಎಂದು ಬಣ್ಣಿಸಿದ್ದಾರೆ.
ಇಮ್ರಾನ್ ಖಾನ್ ಪಾಕಿಸ್ತಾನ ಸಂಸತ್ತಿನಲ್ಲಿ ಮಾಡಿದ ಭಾಷಣದ ವಿರುದ್ಧ ತೀವ್ರ ವಾಕ್ ಪ್ರಹಾರ ನಡೆಸಿದ್ದಾರೆ. ಅಟೋಮ್ ಬಾಂಬ್ ಮತ್ತಿತರ ಸಲಕರಣೆಗಳನ್ನು ಹೊಂದಿರುವುದಾಗಿ ಅವರು ಹೇಳುತ್ತಾರೆ, ಆದರೆ, ನಾವು ಏಕೆ ಹೊಂದಿಲ್ಲವೇ ? ನಾವು ಕೂಡಾ ಇಂತಹ ಸಾಧನಗಳನ್ನು ಹೊಂದಿರುವುದಾಗಿ ಹೇಳಿದರು.
ಭಾರತವನ್ನು ಗುರಿಯಾಗಿಟ್ಟುಕೊಂಡು ಮುಸ್ಲಿಂ ಕಾರ್ಡ್ ಪ್ರಯೋಗಿಸುತ್ತಿರುವ ಇಮ್ರಾನ್ ಖಾನ್ , ಭಾರತದಲ್ಲಿನ ಮುಸ್ಲಿಂರು ಉತ್ತಮ ಜೀವನ ಸಾಗಿಸುತ್ತಿದ್ದೇವೆ.ಮೊದಲು ನಿಮ್ಮ ದೇಶದಲ್ಲಿನ ಲಷ್ಕರ್ -ಇ- ತೊಯ್ಬಾ, ಜೈಷ್- ಇ- ಸೈತನಾ ಉಗ್ರ ಸಂಘಟನೆಗಳನ್ನು ನಿರ್ಮೂಲನೆಗೊಳಿಸಿ ಎಂದರು.
Advertisement