ಅಜ್ಮೀರ್ ಶರೀಫ್ ನಲ್ಲಿ ಪ್ರಧಾನಿ ಪರವಾಗಿ ನಖ್ವಿ ಅವರಿಂದ 'ಚಾದರ್' ಸಮರ್ಪಣೆ

ಖ್ವಾಜ ಮೊಯಿನುದ್ದೀನ್‍ ಚಿಸ್ತಿ ದರ್ಗಾದಲ್ಲಿ 807ನೇ ವಾರ್ಷಿಕ ಉರುಸ್‍ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ 'ಚಾದರ್' ಸಮರ್ಪಿಸಿದರು.
ಅಜ್ಮೀರ್ ಶರೀಫ್ ನಲ್ಲಿ ಪ್ರಧಾನಿ ಪರವಾಗಿ ನಖ್ವಿ ಅವರಿಂದ 'ಚಾದರ್' ಸಮರ್ಪಣೆ
ಅಜ್ಮೀರ್ ಶರೀಫ್ ನಲ್ಲಿ ಪ್ರಧಾನಿ ಪರವಾಗಿ ನಖ್ವಿ ಅವರಿಂದ 'ಚಾದರ್' ಸಮರ್ಪಣೆ
ಜೈಪುರ: ಖ್ವಾಜ ಮೊಯಿನುದ್ದೀನ್‍ ಚಿಸ್ತಿ ದರ್ಗಾದಲ್ಲಿ 807ನೇ ವಾರ್ಷಿಕ ಉರುಸ್‍ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ 'ಚಾದರ್' ಸಮರ್ಪಿಸಿದರು.
ಕ್ರಿ.ಶ1141-1236ರ ವರೆಗೆ ಜೀವಿಸಿದ್ದ ಸಂತ ಖ್ವಾಜಾ ಮೊಯಿನುದ್ದೀನ್‍ ಅವರ ದರ್ಗಾಕ್ಕೆ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಖ್ವಿ ಭೇಟಿ ನೀಡಿದರು. ಬುಲಂದ್ ದರ್ವಾಜಾದಲ್ಲಿ ಸಂದೇಶವನ್ನು ಓದಿದ ಸಚಿವರು, ದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.
 ಮೋದಿಯವರು ತಮ್ಮ ಸಂದೇಶದಲ್ಲಿ, ವಾರ್ಷಿಕ ಉರುಸ್‍ ಅಂಗವಾಗಿ ಖ್ವಾಜ ಮೊಯಿನುದ್ದೀನ್ ಅನುಯಾಯಿಗಳಿಗೆ ಶುಭ ಕೋರಿದ್ದಾರೆ. ವೈವಿಧ್ಯತೆಯಲ್ಲಿ  ಏಕತೆಯು ದೇಶದ ಸೌಂದರ್ಯವಾಗಿದೆ. ನಮ್ಮ ದೇಶದ ಸಂತರು ಶಾಂತಿ ಮತ್ತು ಐಕ್ಯತೆಯ ಸಂದೇಶವನ್ನು ಎಲ್ಲ ಕಾಲಕ್ಕೂ ಸಾರಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರು ಒಬ್ಬ ಸೈನಿಕರಾಗಿದ್ದು, ಸಂತರು ಮತ್ತು ಸೂಫಿಗಳ  ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ ಎಂದು ನಖ್ವಿ ಹೇಳಿದ್ದಾರೆ. 
ನಮ್ಮ ದೇಶ ಭಯೋತ್ಪಾದನೆ ಮುಕ್ತವಾಗಲೆಂಬ ಪ್ರಾರ್ಥನೆಯನ್ನು  ಗರೀಬ್ ನವಾಜ್‍ ಸ್ವೀಕರಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com