ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಟ್ವಿಟ್ಟರ್ ನಲ್ಲಿ "ಮೇ ಭಿ ಚೌಕಿದಾರ್ ಟ್ರೆಂಡಿಂಗ್ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಹೆಸರಿನ ಮುಂದೆ ಪಪ್ಪು ಎಂದು ಸೇರಿಸಿಕೊಳ್ಳಬೇಕು ಎಂದು ಹರ್ಯಾಣ ಸಚಿವ ಅನಿಲ್ ವಿಜ್ ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಹೆಸರಿನ ಮುಂದೆ ಪಪ್ಪು ಎಂದು ಸೇರಿಸಿಕೊಳ್ಳಲಿ, ನಮಗೆ ಯಾವ ಅಭ್ಂತರವೂ ಇಲ್ಲ ಎಂದು ಟಾಂಗ್ ನೀಡಿದ್ದಾರೆ,
ನಾವು ನಮ್ಮ ಹೆಸರಿನ ಮುಂದೆ # ಚೌಕಿದಾರ್ ಎಂದು ಸೇರಿಸಿಕೊಳ್ಳುತ್ತಿದ್ದೇವೆ, ಇದರಿಂದಾಗಿ ನಮಗೆ ಯಾವುದೇ ಸಮಸ್ಯೆಯಿಲ್ಲ, ಹೀಗಾಗಿ ನೀವು ಕೂಡ ಪಪ್ಪು ಎಂದು ಹಾಕಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿಯನ್ನು ಟೀಕಿಸಲು ಬಿಜೆಪಿ ಪಪ್ಪು ಎಂದು ಬಳಸಿಕೊಳ್ಳುತ್ತದೆ.