ನವ ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್27 ರವರೆಗೂ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರನ್ನು ಬಂಧಿಸದಂತೆ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಈ ಆದೇಶ ಹೊರಡಿಸಿದ್ದು, ರಾಬರ್ಟ್ ವಾದ್ರಾರಿಗೆ ಮಧ್ಯಂತರ ರಿಲೀಪ್ ನೀಡಿದ್ದಾರೆ.
ಹಿರಿಯ ವಕೀಲರಾದ ಕೆಟಿಎಸ್ ತುಳಸಿ ರಾಬರ್ಟ್ ವಾದ್ರಾ ಅವರ ಪರವಾಗಿ ವಾದ ಮಂಡಿಸಿ, ಅವರ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು. ಸ್ವತಂತ್ರವನ್ನು ದುರುಪಯೋಗಪಡಿಸಿಕೊಳ್ಳದಂತೆ ಆದೇಶಿಸಿ ನ್ಯಾಯಾಲಯ ರಾಬರ್ಟ್ ವಾದ್ರಾರಿಗೆ ಮದ್ಯಂತರ ರಕ್ಷಣೆ ಒದಗಿಸಿದೆ.