ದೆಹಲಿ: ಮಾರ್ಚ್ 27ರವರೆಗೂ ರಾಬರ್ಟ್ ವಾದ್ರಾ ಬಂಧಿಸದಂತೆ ನ್ಯಾಯಾಲಯ ಆದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್27 ರವರೆಗೂ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರನ್ನು ಬಂಧಿಸದಂತೆ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
Updated on
ನವ ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್27 ರವರೆಗೂ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರನ್ನು ಬಂಧಿಸದಂತೆ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್  ಈ ಆದೇಶ ಹೊರಡಿಸಿದ್ದು,  ರಾಬರ್ಟ್ ವಾದ್ರಾರಿಗೆ ಮಧ್ಯಂತರ ರಿಲೀಪ್ ನೀಡಿದ್ದಾರೆ.
ಹಿರಿಯ ವಕೀಲರಾದ  ಕೆಟಿಎಸ್ ತುಳಸಿ ರಾಬರ್ಟ್ ವಾದ್ರಾ ಅವರ ಪರವಾಗಿ ವಾದ ಮಂಡಿಸಿ,  ಅವರ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು. ಸ್ವತಂತ್ರವನ್ನು ದುರುಪಯೋಗಪಡಿಸಿಕೊಳ್ಳದಂತೆ ಆದೇಶಿಸಿ  ನ್ಯಾಯಾಲಯ ರಾಬರ್ಟ್ ವಾದ್ರಾರಿಗೆ  ಮದ್ಯಂತರ ರಕ್ಷಣೆ ಒದಗಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com