ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಕಲಹ ತಲೆದೋರಿದ್ದು, ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಪಕ್ಷದ ಯುವ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆರ್ ಜೆಡಿ ಯುವ ಘಟಕ ಮುಖ್ಯಸ್ಥ ಸ್ಥಾನವನ್ನು ತ್ಯಜಿಸಿರುವುದಾಗಿ ತೇಜ್ ಪ್ರತಾಪ್ ಯಾದವ್ ಟ್ವೀಟ್ ಮಾಡಿದ್ದು, ಎಲ್ಲರ ಯೋಗ್ಯತೆ ಏನು ಎಂಬುದು ನನ್ನಗೆ ಗೊತ್ತಿದೆ. ನಾನು ನಿಷ್ಕಪಟ ಎಂದು ಹೇಳಿಕೊಂಡಿದ್ದಾರೆ.
ಪ್ರತಿಪಕ್ಷ ಮುಖಂಡ, ಸಹೋದರ ತೇಜಸ್ವಿ ಯಾದವ್ ಜೊತೆಗಿನ ಅಧಿಕಾರ ಸಂಬಂಧಿತ ಭಿನ್ನಾಭಿಪ್ರಾಯದಿಂದಾಗಿ ತೇಜ್ ಪ್ರತಾಪ್ ಅವರನ್ನು ವಜಾಮಾಡಲಾಗಿದೆ ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ.
Advertisement