ಬಿಜೆಪಿಯಂತೆ ಕಾಂಗ್ರೆಸ್ ಟೊಳ್ಳು-ಸುಳ್ಳು ಭರವಸೆಗಳನ್ನು ನೀಡುವುದಿಲ್ಲ: ರಾಬರ್ಟ್ ವಾದ್ರಾ

ಉದ್ಯಮಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಇಳಿದ ಬೆನ್ನಲ್ಲೇ ಅವರ ಪತಿ ರಾಬರ್ಟ್​ ವಾದ್ರಾ ಕೂಡ ಕೆಲವು ರಾಜಕೀಯ ....
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
Updated on
ನವದೆಹಲಿ: ಉದ್ಯಮಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ  ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಇಳಿದ ಬೆನ್ನಲ್ಲೇ ಅವರ ಪತಿ ರಾಬರ್ಟ್​ ವಾದ್ರಾ ಕೂಡ ಕೆಲವು ರಾಜಕೀಯ ವಿಚಾರಗಳನ್ನು ಮಾತನಾಡಲು ಅರಂಭಿಸಿದ್ದಾರೆ 
ಫೇಸ್​ಬುಕ್​ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿರುವ ರಾಬರ್ಟ್ ವಾದ್ರಾ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನರಿಗೆ ಟೊಳ್ಳು ಹಾಗೂ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್​ಬಿಜೆಪಿಯಂತೆ ಮಾಡುವುದಿಲ್ಲ. ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆ. ಜನರಿಗೆ ಏನು ಬೇಕೋ ಅದನ್ನು ನಮ್ಮ ಪಕ್ಷ ನೀಡುತ್ತದೆ ಎಂದು ಬರೆದಿದ್ದಾರೆ. ಅಲ್ಲದೆ ಎರಡು ಫೋಟೋಗಳನ್ನೂ ಅವರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದ ಫೋಟೋದಲ್ಲಿ ಅವರು ಜನರನ್ನು ಮತದಾನ ಮಾಡಲು ಒತ್ತಾಯಿಸುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ರಾಬರ್ಟ್​ ವಾದ್ರಾ ಬಡವರಿಗೆ ಆಹಾರ ನೀಡುತ್ತಿರುವುದನ್ನು ನೋಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com