ವಿಜಯೋತ್ಸವದ ಬೆನ್ನಲ್ಲೇ ಹರಿದ ನೆತ್ತರು, ಅಮೇಥಿಯಲ್ಲಿ ದುಷ್ಕರ್ಮಿಗಳಿಂದ ಸ್ಮೃತಿ ಇರಾನಿ ಆಪ್ತನ ಗುಂಡಿಕ್ಕಿ ಹತ್ಯೆ

ವಿಜಯೋತ್ಸವದ ಬೆನ್ನಲ್ಲೇ ಹರಿದ ನೆತ್ತರು, ಅಮೇಥಿಯಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಸ್ಮೃತಿ ಇರಾನಿ ಆಪ್ತನ ಗುಂಡಿಕ್ಕಿ ಹತ್ಯೆ
ಸುರೇಂದ್ರ ಸಿಂಗ್
ಸುರೇಂದ್ರ ಸಿಂಗ್
Updated on
ಅಮೇಥಿ: ಆಘಾತಕಾರಿ ಘಟನೆಯೊಂದರಲ್ಲಿ ಲೋಕಸಭೆ ಚುನಾವಣೆ ಗೆಲುವಿನ ಸಂಭ್ರಮಾಚರಣೆಯ ಬೆನಲ್ಲೇ ಬಿಜೆಪಿ ಸ್ಮೃತಿ ಇರಾನಿ ಆಪ್ತನೊಬ್ಬನನ್ನು ಅಪರಿಚಿತರು ಗುಂಡು ಹಾರಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.
ಸ್ಮೃತಿ ಇರಾನಿ ಬೆಂಬಲಿಗರಾದ ಸುರೇಂದ್ರ ಸಿಂಗ್ ಅವರನ್ನು ಶನಿವಾರ ತಡರಾತ್ರಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಸುರೇಂದ್ರ ಸಿಂಗ್ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಪರ ಪ್ರಚಾರ ಮಡಿದ್ದರು.
ಅಮೇಥಿಯ ಬರೌಲಿಯಾ ಗ್ರಾಮದ ಪಕ್ಷದ ಮುಖ್ಯಸ್ಥರಾಗಿದ್ದ ಸುರೇಂದ್ರ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದರು,.
ಅಮೇಥಿಯ ಜಾವೀ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com