ಇದಕ್ಕು ಮುನ್ನ ವೈಎಸ್ ಆರ್ ಕಾಂಗ್ರೆಸ್ ನಾಯಕ ಬೊಸ್ತ ಸತ್ಯನಾರಾಯಣ ಮತ್ತು ಇತರೆ ಚುನಾಯಿತ ಸದಸ್ಯರು ರಾಜಭವನಕ್ಕೆ ತೆರಳಿ, ಪಕ್ಷದ ನೂತನ ಶಾಸಕರು ಜಗನ್ ಅವರನ್ನು ವೈಎಸ್ ಆರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ ನಿರ್ಣಯವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಅಲ್ಲದೆ ಸರ್ಕಾರ ರಚನೆಗೆ ಆಹ್ವಾನಿಸುವಂತೆ ಮನವಿ ಮಾಡಿದ್ದರು.