ಇಂದು ಹರಿದ್ವಾರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಬಾಬಾ ರಾಮ್ ದೇವ್ ಅವರು, ಮೋದಿ ಕೋಟ್ಯಂತರ ಜನರ ನಂಬಿಕೆ ಗೆದ್ದಿದ್ದಾರೆ. ಒಂದು ಕಡೆ ಮಹಾಘಟ್ಬಂಧನ್, ಇನ್ನೊಂದು ಕಡೆ ಮೋದಿ ಚುನಾವಣೆಯಲ್ಲಿ ಹೋರಾಟ ನಡೆಸಿದರು. ಆದರೂ ಉತ್ತರ ಪ್ರದೇಶದಲ್ಲಿ ಮೋದಿ ಅವರು ಭರ್ಜರಿ ಜಯ ಸಾಧಿಸಿದರು. ಜನತೆ ಅವರ ಕೈಯಲ್ಲಿ ಸುರಕ್ಷಿತವಾಗಿದ್ದಾರೆ ಎಂದರು.