ಜಾರ್ಖಂಡ್ ನಲ್ಲಿ ನಕ್ಸಲೀಯರಿಂದ ಐಇಡಿ ಸ್ಫೋಟ: 11 ಸಿಆರ್ ಪಿಎಫ್, ರಾಜ್ಯ ಪೊಲೀಸ್ ಸಿಬ್ಬಂದಿಗೆ ಗಾಯ

ಜಾರ್ಖಂಡ್ ನ ಸೆರೈಕೆಲಾ ಖರ್ಸವನ್ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಕ್ಸಲೀಯರ ಐಇಡಿ ಸ್ಫೋಟಕ್ಕೆ 11 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಮತ್ತು ರಾಜ್ಯ ಪೊಲೀಸ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ರಾಂಚಿ: ಜಾರ್ಖಂಡ್ ನ ಸೆರೈಕೆಲಾ ಖರ್ಸವನ್ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಕ್ಸಲೀಯರ ಐಇಡಿ ಸ್ಫೋಟಕ್ಕೆ 11 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸಿಆರ್ ಪಿಎಫ್ ನ ವಿಶೇಷ ಅರಣ್ಯ ಯುದ್ಧ ಘಟಕ, ಕೋಬ್ರಾ ಮತ್ತು ರಾಜ್ಯ ಪೊಲೀಸರು ಜಂಟಿ ತಂಡ ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ  ಕುಚೈ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ.
ಸುಧಾರಿತ ಸ್ಫೋಟಕ ಸಾಮಗ್ರಿಯಾದ ಐಇಡಿಯನ್ನು ಧೂಳು ತುಂಬಿದ ಹಾದಿಯಡಿ ಇಟ್ಟಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com