ಸಂಜಯ್ ರಾವತ್
ಸಂಜಯ್ ರಾವತ್

ದೆಹಲಿಯಲ್ಲಿ ನಡೆಯುವ ಎನ್‌ಡಿಎ ಸಭೆಯಲ್ಲಿ ಶಿವಸೇನೆ ಭಾಗವಹಿಸುವುದಿಲ್ಲ: ಸಂಜಯ್ ರಾವತ್‍

ಕೇಂದ್ರ ಸಚಿವ ಸ್ಥಾನಕ್ಕೆ ಅರವಿಂದ ಸಾವಂತ್ ರಾಜೀನಾಮೆ ನೀಡಿದ ನಂತರ, ಸಂಸತ್ ಅಧಿವೇಶನದ ಮುನ್ನಾ ದಿನವಾದ ಭಾನುವಾರ ದೆಹಲಿಯಲ್ಲಿ ನಿಗದಿಯಾಗಿರುವ ಎನ್‌ಡಿಎ ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಶಿವಸೇನೆ ಶನಿವಾರ ಪ್ರಕಟಿಸಿದೆ.
Published on

ಮುಂಬೈ: ಕೇಂದ್ರ ಸಚಿವ ಸ್ಥಾನಕ್ಕೆ ಅರವಿಂದ ಸಾವಂತ್ ರಾಜೀನಾಮೆ ನೀಡಿದ ನಂತರ, ಸಂಸತ್ ಅಧಿವೇಶನದ ಮುನ್ನಾ ದಿನವಾದ ಭಾನುವಾರ ದೆಹಲಿಯಲ್ಲಿ ನಿಗದಿಯಾಗಿರುವ ಎನ್‌ಡಿಎ ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಶಿವಸೇನೆ ಶನಿವಾರ ಪ್ರಕಟಿಸಿದೆ.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆ ಸಂಸದ ಸಂಜಯ್ ರಾವತ್‍, ‘ನಾವು ನಾಳಿನ ಸಭೆಗೆ ಹಾಜರಾಗುವುದಿಲ್ಲ’ ಎಂದು ಹೇಳಿದ್ದಾರೆ.

ಶಿವಸೇನೆ, ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ವಾಸ್ತವಿಕವಾಗಿ ಬೇರ್ಪಟ್ಟಿದೆ ಎಂಬ ಸುಳಿವನ್ನು ಅವರು ಈ ಹೇಳಿಕೆ ಮೂಲಕ ನೀಡಿದ್ದಾರೆ. 

ರಾಜ್ಯ ಬಿಜೆಪಿ ವಕ್ತಾರ ಮಾಧವ್ ಭಂಡಾರಿ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಯಾವುದೇ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಆದರೆ ಭಾನುವಾರ ಎನ್‌ಡಿಎ ಸಮಾವೇಶಕ್ಕೆ ಏಕೆ ಹಾಜರಾಗುವುದಿಲ್ಲ ಎಂಬ ಬಗ್ಗೆ ನೀವು ಶಿವಸೇನೆಗೆ ಪ್ರಶ್ನೆ ಕೇಳಬೇಕು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com