ಐಎನ್ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ವಿಚಾರಣೆ ಮಾಡಿ, ಅಗತ್ಯವಾದರೆ ಬಂಧಿಸಿ-ಇಡಿಗೆ ದೆಹಲಿ ಕೋರ್ಟ್

ಐಎನ್‌ಎಕ್ಸ್ ಮೀಡಿಯಾ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ವಿಚಾರಣೆ ನಡೆಸಲು ಇಡಿಗೆ ಅನುಮತಿ ನೀಡಿದೆ.
ಚಿದಂಬರಂ
ಚಿದಂಬರಂ
Updated on

ಐಎನ್‌ಎಕ್ಸ್ ಮೀಡಿಯಾ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ವಿಚಾರಣೆ ನಡೆಸಲು ಇಡಿಗೆ ಅನುಮತಿ ನೀಡಿದೆ.

ಸಿಬಿಐ ಸಲ್ಲಿಸಿದ ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಅಕ್ಟೋಬರ್ 17 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಚಿದಂಬರಂ ಅವರನ್ನು ಪ್ರಶ್ನಿಸಲು ಅನುಮತಿ ಕೋರಿ ಇಡಿ ಮನವಿಯನ್ನು  ಆಲಿಸಿದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ವಿಚಾರಣೆಗೆ ಅನುಮತಿ ನೀಡಿದ್ದಾರೆ.ಯಾಲಯವು ಆದೇಶವನ್ನು ಅಂಗೀಕರಿಸಿದ ನಂತರ, ಇಡಿ ಅವರನ್ನು ರೂಸ್ ಅವೆನ್ಯೂ ನ್ಯಾಯಾಲಯದ ಆವರಣದಲ್ಲಿ ಲಭ್ಯವಿರುವ ಕೆಲವು  ಸ್ಥಳಗಳಲ್ಲಿ ಪ್ರಶ್ನಿಸಲು ಅನುಮತಿ ಕೋರಿದೆ

ಆದಾಗ್ಯೂ, ನ್ಯಾಯಾಲಯವು "ಈ ವ್ಯಕ್ತಿಯ ಘನತೆಗೆ ತಕ್ಕಂತೆ ನೀವು ಅವರನ್ನು ವಿಚಾರಣೆ ಮಾಡಿರಿ." ಎಂದಿದಿದೆ. ಕಾಂಗ್ರೆಸ್ ನಾಯಕ ಚಿದಂಬರಂ ಅವರಿರುವ ತಿಹಾರ್ ಜೈಲಿಗೆ ತೆರಳಲು ನ್ಯಾಯಾಲಯ ಇಡಿಗೆ ಅನುಮತಿ ನೀಡಿತು, ಬುಧವಾರ ಅವರನ್ನು ಪ್ರಶ್ನಿಸಲು, ಮತ್ತು ಅಗತ್ಯವಿದ್ದರೆ ಅವರನ್ನು ಬಂಧಿಸಲು ಸಹ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com