ಮಹಿಳೆಯರ ಕಣ್ಣೀರಿನ ಶಾಪ ಇದು:  ಅಜಂಖಾನ್ ಕುಸಿದುಬಿದ್ದಿದ್ದಕ್ಕೆ ಜಯಪ್ರದ ಪ್ರತಿಕ್ರಿಯೆ

ಚುನಾವಣಾ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ರ್ಯಾಲಿಯಲ್ಲಿ ಕುಸಿದು ಬಿದ್ದಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಜಯಪ್ರದ ತಿರುಗೇಟು ನೀಡಿದ್ದಾರೆ.
ಜಯಪ್ರದಾ
ಜಯಪ್ರದಾ
Updated on

ರಾಂಪುರ: ಚುನಾವಣಾ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ರ್ಯಾಲಿಯಲ್ಲಿ ಕುಸಿದು ಬಿದ್ದಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಜಯಪ್ರದ ತಿರುಗೇಟು ನೀಡಿದ್ದಾರೆ.

ಉತ್ತರ ಪ್ರದೇಶದ ರಾಂಪುದಲ್ಲಿ ಮಾತನಾಡಿದ ಜಯಪ್ರದ ಅವರು, ಅಜಂಖಾನ್ ಕುಸಿದು ಬೀಳಲು ಹೆಣ್ಣು ಮಕ್ಕಳ ಕಣ್ಣೀರಿನ ಶಾಪವೇ ಕಾರಣ, ಪ್ರತಿಯೊಂದು ಸಾರ್ವಜನಿಕ ಸಭೆಗಳಲ್ಲಿ  ಅವರು ಅಳುತ್ತಿದ್ದಾರೆ,  ನಾನು ತುಂಬಾ ಚೆನ್ನಾಗಿ ನಟಿಸುತ್ತೇನೆ ಎಂದು ಹೇಳುತ್ತಿದ್ದರು, ಆದರೆ ಅವರು ಈಗ ಮಾಡುತ್ತಿರುವುದು ಏನು ಎಂದು ಜಯಪ್ರದಾ ಪ್ರಶ್ನಿಸಿದ್ದಾರೆ.

ಈ ಹಿಂದೆ ಜಯಪ್ರದ ಸಮಾಜವಾದಿ ಪಕ್ಷದ  ಸಂಸದೆಯಾಗಿದ್ದರು, ಆದರೆ 2010 ರಲ್ಲಿ ಅಮರ್ ಸಿಂಗ್ ಜೊತೆ ಜಯಪ್ರದಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು, ಜಯಪ್ರದಾ ಅವರನ್ನು ಪಕ್ಷದಿಂದ ಉಚ್ಚಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಮಾಜವಾದಿ ಪಕ್ಷದ ನಾಯಕನಾಗಿರುವ ಅಜಂಖಾನ್ ವಿರುದ್ಧ ಈಗಾಗಲೇ ಸುಮಾರು 80 ಕೇಸುಗಳು ದಾಖಲಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com