ನಿರ್ವಸಿತರ ಪುನರ್ವಸತಿಗೆ ಒತ್ತಾಯಿಸಿ ಉಪವಾಸ: ಮೇಧಾ ಪಾಟ್ಕರ್ ಆರೋಗ್ಯದಲ್ಲಿ ಏರುಪೇರು

ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯಿಂದ ನಿರ್ವಸಿತರಾದವರಿಗೆ ಪುನರ್ವಸತಿಗಾಗಿ  ಕಳೆದ ಎಂಟು ದಿನಗಳಿಂದ ಉಪವಾಸ ನಡೆಸಿರುವ  ನರ್ಮದಾ ಬಚಾವೊ ಆಂಡೋಲನ್ (ಎನ್‌ಬಿಎ) ನಾಯಕಿ  ಮೇಧಾ ಪಾಟ್ಕರ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ಅವರ ಕೆಲವು ಸಹ ಪ್ರತಿಭಟನಾಕಾರರು ಹೇಳಿದ್ದಾರೆ.
ಮೇಧಾ ಪಾಟ್ಕರ್
ಮೇಧಾ ಪಾಟ್ಕರ್
Updated on

ಸರ್ದಾರ್ ಸರೋವರ್ ಅಣೆಕಟ್ಟು ಯೋಜನೆಯಿಂದ ನಿರ್ವಸಿತರಾದವರಿಗೆ ಪುನರ್ವಸತಿಗಾಗಿ  ಕಳೆದ ಎಂಟು ದಿನಗಳಿಂದ ಉಪವಾಸ ನಡೆಸಿರುವ  ನರ್ಮದಾ ಬಚಾವೊ ಆಂಡೋಲನ್ (ಎನ್‌ಬಿಎ) ನಾಯಕಿ  ಮೇಧಾ ಪಾಟ್ಕರ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ಅವರ ಕೆಲವು ಸಹ ಪ್ರತಿಭಟನಾಕಾರರು ಹೇಳಿದ್ದಾರೆ.

ಆದರೆ ಪಾಟ್ಕರ್ ಆರೋಗ್ಯ ಸ್ಥಿತಿಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ, ಅಲ್ಲದೆ ಆಕೆ ವೈದ್ಯರ ಪರೀಕ್ಷೆಗೆ ಸಹ ಒಪ್ಪುತ್ತಿಲ್ಲವೆನ್ನಲಾಗಿದೆ.

"ಪಾಟ್ಕರ್ ವೈದ್ಯಕೀಯ ಪರೀಕ್ಷೆಗೆ ಒಲಪಡಲು ನಿರಾಕರಿಸುತ್ತಿದ್ದು ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ಜಿಲ್ಲಾ ಕಲೆಕ್ಟರ್  ಅಮಿತ್ ತೋಮರ್ ಪಿಟಿಐಗೆ ತಿಳಿಸಿದ್ದಾರೆ. ""ನಾನು ಅವರ ಆರೋಗ್ಯ ಪರೀಕ್ಷೆಗಾಗಿ  ಪ್ರತಿದಿನ ಅಧಿಕಾರಿಗಳನ್ನು ಕಳುಹಿಸುತ್ತಿದ್ದೇನೆ ಆದರೆ ಅವರು ಪರೀಕ್ಷೆಗೆ ಒಳಪಡಲು ನಿರಾಕರಿಸುತ್ತಿದ್ದಾರೆ"  ಅವರು ಹೇಳಿದರು.

ಮೇಧಾ ಪಾಟ್ಕರ್ ಪ್ರತಿಭಟನೆ ನಡೆಸುತ್ತಿರುವ ಪ್ರದೇಶವು ಸರ್ದಾರ್ ಸರೋವರ್ ಅಣೆಕಟ್ಟಿನ ಜಲಾನಯನ ಪ್ರದೇಶದ ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com