ಉತ್ತರಪ್ರದೇಶ: ಹಿಂದುಗಳಿಗೆ ಬಲವಂತದ 'ಬಾಡೂಟ', 43 ಮುಸ್ಲಿಂರ ವಿರುದ್ಧ ಪ್ರಕರಣ

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದ ಉರ್ಸ್ ಉತ್ಸವದಲ್ಲಿ ಹಿಂದೂಗಳಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ ಆರೋಪದ ಮೇಲೆ 43 ಮಂದಿ ಮುಸ್ಲಿಂರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಚಿಕನ್ ಬಿರಿಯಾನಿ
ಚಿಕನ್ ಬಿರಿಯಾನಿ

ಉತ್ತರಪ್ರದೇಶ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದ ಉರ್ಸ್ ಉತ್ಸವದಲ್ಲಿ ಹಿಂದೂಗಳಿಗೆ ಬಲವಂತವಾಗಿ ಬಿರಿಯಾನಿ ತಿನ್ನಿಸಿದ ಆರೋಪದ ಮೇಲೆ 43 ಮಂದಿ ಮುಸ್ಲಿಂರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಆಗಸ್ಟ್ 31ರಂದು ಚಾರ್ಖಾರಿ ಪ್ರದೇಶದ ಸಲಾತ್ ಗ್ರಾಮದಲ್ಲಿ ಶೇಖ್ ಪೀರ್ ಬಾಬ್ ಅವರ ಉರ್ಸ್ ಸಂದರ್ಭದಲ್ಲಿ ಈ ಉರ್ಸ್ ಅನ್ನು ಆಯೋಜಿಸಲಾಗಿತ್ತು. ಈ ವೇಳೆ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿ ಬಿರಿಯಾನಿಯನ್ನು ಉದ್ದೇಶಪೂರ್ವಕವಾಗಿ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿತ್ತು. 

ಬಿಜೆಪಿ ಶಾಸಕ ಬ್ರಿಜ್ಛೂಷಣ್ ರಾಜಪೂತ್ ಅವರು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು 43 ಮುಸ್ಲಿಂರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

43 ಮುಸ್ಲಿಂರ ವಿರುದ್ಧ 153ಎ(ಧರ್ಮದ ನೆಲೆಯಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295ಎ(ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), 420(ವಂಚನೆ) ಮತ್ತು 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com