ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ-ಶಿವಸೇನೆ ನಡುವಿನ ಸೀಟು ಹಂಚಿಕೆಯನ್ನು ಶಿವಸೇನೆ ನಾಯಕ ಸಂಜಯ್ ರಾವುತ್ ಭಾರತ-ಪಾಕ್ ವಿಭಜನೆಗೆ ಹೋಲಿಕೆ ಮಾಡಿದ್ದಾರೆ.
ಮಹಾರಾಷ್ಟ್ರ ದೊಡ್ಡ ರಾಜ್ಯ, 288 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡುವುದು ಭಾರತ-ಪಾಕಿಸ್ತಾನ ವಿಭಜನೆಗಿಂತಲೂ ದೊಡ್ಡದು, ನಾವು ಸರ್ಕಾರದ ಭಾಗವಾಗಿರುವುದಕ್ಕಿಂತಲೂ ವಿಪಕ್ಷದ ಸ್ಥಾನದಲ್ಲಿ ಕುಳಿತಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು ಎಂದು ರಾವುತ್ ಹೇಳಿದ್ದಾರೆ.
ಶೀಘ್ರವೇ ಬಿಜೆಪಿ-ಶಿವಸೇನೆ ಮೈತ್ರಿಯ ನಾಯಕರು ಸೀಟು ಹಂಚಿಕೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ರಾವುತ್ ತಿಳಿಸಿದ್ದಾರೆ.
ಬಿಜೆಪಿ-ಶಿವಸೇನೆ ಮೈತ್ರಿ ಬಗ್ಗೆ ಆ ಪಕ್ಷದ ನಾಯಕರಿಗೆ ಇರುವ ಕಾಳಜಿಗಿಂತಲೂ ಹೆಚ್ಚು ಕಾಳಜಿ ಮಾಧ್ಯಮಗಳಿಗೆ ಇದೆ. ನಾವು ಸಮಾಧಾನದಿಂದ ಇದ್ದೇವೆ, ಸ್ಥಾನ ಹಂಚಿಕೆ ಕುರಿತು ಉಭಯ ಪಕ್ಷಗಳ ನಾಯಕರೂ ಸಹ ಸಕಾರಾತ್ಮಕ ಮಾತುಕತೆ ನಡೆಸುತ್ತಿದ್ದಾರೆ. ನಿರ್ಧಾರ ಏನೇ ಇದ್ದರೂ ಮಾಧ್ಯಮಗಳಿಗೆ ಶೀಘ್ರವೇ ತಿಳಿಸುವುದಾಗಿ ಸಂಜಯ್ ರಾವುತ್ ಹೇಳಿದ್ದಾರೆ.
Advertisement