ಗುವಾಹಟಿ:ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ಅಸ್ಸಾಂ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿರುವುದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಗುವಾಹಟಿಯಲ್ಲಿ ಸಿಲುಕಿ ಹಾಕಿಕೊಂಡಿರುವ ಪ್ರಯಾಣಿಕರನ್ನು ತಮ್ಮ ತಮ್ಮ ಪ್ರದೇಶಗಳಿಗೆ ಕರೆದೊಯ್ಯಲು ವಿಶೇಷ ಪ್ರಯಾಣ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ಈಶಾನ್ಯ ವಲಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ನಿನ್ನೆ ದಿಮಪುರ್ ಗೆ ವಿಶೇಷ ರೈಲು ಮತ್ತು ಇಂದು ಫರ್ಕೇಟಿಂಗ್ ಮತ್ತು ದಿಬ್ರುಗರ್ ಗೆ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಅಸ್ಸಾಂನ ದಿಬ್ರುಗರ್ ನಿಂದ ನಿನ್ನೆ 9 ರೈಲುಗಳ ಸಂಚಾರ ಪ್ರತಿಭಟನೆ ಹಿನ್ನಲೆಯಲ್ಲಿ ರದ್ದುಗೊಂಡಿದ್ದವು.
ದಿಬ್ರುಗರ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ಸೇರಿದಂತೆ ಮೂರು ರೈಲುಗಳು, ದೆಹಲಿಯಿಂದ ದಿಬ್ರುಗರ್ ಗೆ ಪ್ರಯಾಣಿಸುತ್ತಿದ್ದ ಬ್ರಹ್ಮಪುತ್ರ ಮೈಲ್ ಭಾಗಶಃ ರದ್ದಾಗಿದ್ದವು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Advertisement