ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ ಸರ್ಕಾರ ರಚನೆ ಮಾಡಲಿದ್ದು ಎರಡೂ ಪಕ್ಷಗಳ ನಡುವೆ 50:50 ಸೂತ್ರವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಉದ್ದವ್ ಠಾಕ್ರೆಯವರನ್ನು ಇಂದು ಭೇಟಿ ಮಾಡಲಿದ್ದೇನೆ. ನಾವು ಖಂಡಿತವಾಗಿಯೂ ಮೈತ್ರಿ ಮುಂದುವರಿಸಿ ಸರ್ಕಾರ ರಚಿಸುತ್ತೇವೆ ಎಂದರು. ಈ ಬಾರಿ ಮೈತ್ರಿಕೂಟಕ್ಕೆ ಕಳೆದ ವಿಧಾನಸಭೆ ಚುನಾವಣೆಗಿಂತ ಕಡಿಮೆ ಗೆಲುವು ಬಂದಿದೆಯಲ್ಲವೇ ಎಂದು ಕೇಳಿದಾಗ ಈ ಬಾರಿಯ ಫಲಿತಾಂಶ ಅಷ್ಟೇನು ಕೆಟ್ಟದಾಗಿಲ್ಲ. ಆಗಾಗ ಹಾಗೆ ಆಗುತ್ತಿರುತ್ತದೆ ಎಂದರು.
ಸದ್ಯ ಮಹಾರಾಷ್ಟ್ರದ ಫಲಿತಾಂಶ ನೋಡುವುದಾದರೆ ಬಿಜೆಪಿ ಮತ್ತು ಶಿವಸೇನೆ 165 ಕಾಂಗ್ರೆಸ್ ಮತ್ತು ಎನ್ ಸಿಪಿ 94 ಕ್ಷೇತ್ರಗಳಲ್ಲಿ ಮತ್ತು ಇತರೆ ಪಕ್ಷಗಳು 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
Advertisement