ನಾವು 50:50 ಸೂತ್ರ ಪಾಲಿಸಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತೇವೆ: ಸಂಜಯ್ ರಾವತ್ 

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ ಸರ್ಕಾರ ರಚನೆ ಮಾಡಲಿದ್ದು ಎರಡೂ ಪಕ್ಷಗಳ ನಡುವೆ 50:50 ಸೂತ್ರವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಉದ್ದವ್ ಠಾಕ್ರೆ-ದೇವೇಂದ್ರ ಫಡ್ನವೀಸ್
ಉದ್ದವ್ ಠಾಕ್ರೆ-ದೇವೇಂದ್ರ ಫಡ್ನವೀಸ್
Updated on

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ ಸರ್ಕಾರ ರಚನೆ ಮಾಡಲಿದ್ದು ಎರಡೂ ಪಕ್ಷಗಳ ನಡುವೆ 50:50 ಸೂತ್ರವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.


ಉದ್ದವ್ ಠಾಕ್ರೆಯವರನ್ನು ಇಂದು ಭೇಟಿ ಮಾಡಲಿದ್ದೇನೆ. ನಾವು ಖಂಡಿತವಾಗಿಯೂ ಮೈತ್ರಿ ಮುಂದುವರಿಸಿ ಸರ್ಕಾರ ರಚಿಸುತ್ತೇವೆ ಎಂದರು. ಈ ಬಾರಿ ಮೈತ್ರಿಕೂಟಕ್ಕೆ ಕಳೆದ ವಿಧಾನಸಭೆ ಚುನಾವಣೆಗಿಂತ ಕಡಿಮೆ ಗೆಲುವು ಬಂದಿದೆಯಲ್ಲವೇ ಎಂದು ಕೇಳಿದಾಗ ಈ ಬಾರಿಯ ಫಲಿತಾಂಶ ಅಷ್ಟೇನು ಕೆಟ್ಟದಾಗಿಲ್ಲ. ಆಗಾಗ ಹಾಗೆ ಆಗುತ್ತಿರುತ್ತದೆ ಎಂದರು. 

ಸದ್ಯ ಮಹಾರಾಷ್ಟ್ರದ ಫಲಿತಾಂಶ ನೋಡುವುದಾದರೆ ಬಿಜೆಪಿ ಮತ್ತು ಶಿವಸೇನೆ 165 ಕಾಂಗ್ರೆಸ್ ಮತ್ತು ಎನ್ ಸಿಪಿ 94 ಕ್ಷೇತ್ರಗಳಲ್ಲಿ ಮತ್ತು ಇತರೆ ಪಕ್ಷಗಳು 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com