ಮುಂಬೈ: ಮಹಾರಾಷ್ಟ್ರದಲ್ಲಿ ಜುನಾ ಅಖಾಡದ ಸಾಧು-ಸನ್ಯಾಸಿಗಳನ್ನು ಹೊಡೆದು ಹತ್ಯೆ ಮಾಡಿರುವ ಘಟನೆಯ ಬಗ್ಗೆ ದ್ವಾರಕಾ- ಜ್ಯೋತಿರ್ಮಠದ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.
ಪೊಲೀಸರ ಸಮ್ಮುದಖದಲ್ಲೇ ಸನ್ಯಾಸಿಗಳನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಈ ಘಟನೆ ಸುಸಂಸ್ಕೃತ ಹಿಂದೂ ಸಮಾಜಕ್ಕೆ ಆತಂಕ ಉಂಟುಮಾಡಿದೆ. ಈ ರೀತಿಯ ಕೃತ್ಯ ಆತಂಕವಾದಿಗಳದ್ದಾಗಿದೆ.
ಸನ್ಯಾಸಿಗಳನ್ನು ಹೊಡೆದು ಸಾಯಿಸಿರುವ ವಿಡಿಯೋ ದೇಶಾದ್ಯಂತ ತಲುಪಿದೆ. ಪೊಲೀಸರಿದ್ದರೂ ಯಾವುದೇ ಭಯ, ಭೀತಿ ಇಲ್ಲದೇ ಹಲ್ಲೆ, ಹತ್ಯೆ ನಡೆದಿದೆ. ಅರಾಜಕತೆಗೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಇನ್ನೇನು ಇರಲು ಸಾಧ್ಯ? ಈ ಕೃತ್ಯಕ್ಕೆ ಕಾರಣರಾಗಿರುವ ದೋಷಿಗಳಿಗೆ ಶೀಘ್ರವೇ ಕಠಿಣ ಶಿಕ್ಷೆ ವಿಧಿಸಬೇಕೆಂದು ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
Advertisement