ಸಾಧು-ಸನ್ಯಾಸಿಗಳ ಹತ್ಯೆ: ಮಹಾರಾಷ್ಟ್ರ ಸಿಎಂಗೆ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಪತ್ರ

ಮಹಾರಾಷ್ಟ್ರದಲ್ಲಿ ಜುನಾ ಅಖಾಡದ ಸಾಧು-ಸನ್ಯಾಸಿಗಳನ್ನು ಹೊಡೆದು ಹತ್ಯೆ ಮಾಡಿರುವ ಘಟನೆಯ ಬಗ್ಗೆ ದ್ವಾರಕಾ- ಜ್ಯೋತಿರ್ಮಠದ  ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.
ಸ್ವರೂಪಾನಂದ ಸರಸ್ವತಿ ಸ್ವಾಮೀಜಿ
ಸ್ವರೂಪಾನಂದ ಸರಸ್ವತಿ ಸ್ವಾಮೀಜಿ
Updated on

ಮುಂಬೈ: ಮಹಾರಾಷ್ಟ್ರದಲ್ಲಿ ಜುನಾ ಅಖಾಡದ ಸಾಧು-ಸನ್ಯಾಸಿಗಳನ್ನು ಹೊಡೆದು ಹತ್ಯೆ ಮಾಡಿರುವ ಘಟನೆಯ ಬಗ್ಗೆ ದ್ವಾರಕಾ- ಜ್ಯೋತಿರ್ಮಠದ  ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.

ಪೊಲೀಸರ ಸಮ್ಮುದಖದಲ್ಲೇ ಸನ್ಯಾಸಿಗಳನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಈ ಘಟನೆ ಸುಸಂಸ್ಕೃತ ಹಿಂದೂ ಸಮಾಜಕ್ಕೆ ಆತಂಕ ಉಂಟುಮಾಡಿದೆ. ಈ ರೀತಿಯ ಕೃತ್ಯ ಆತಂಕವಾದಿಗಳದ್ದಾಗಿದೆ.

ಸನ್ಯಾಸಿಗಳನ್ನು ಹೊಡೆದು ಸಾಯಿಸಿರುವ ವಿಡಿಯೋ ದೇಶಾದ್ಯಂತ ತಲುಪಿದೆ. ಪೊಲೀಸರಿದ್ದರೂ ಯಾವುದೇ ಭಯ, ಭೀತಿ ಇಲ್ಲದೇ ಹಲ್ಲೆ, ಹತ್ಯೆ ನಡೆದಿದೆ. ಅರಾಜಕತೆಗೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಇನ್ನೇನು ಇರಲು ಸಾಧ್ಯ? ಈ ಕೃತ್ಯಕ್ಕೆ ಕಾರಣರಾಗಿರುವ ದೋಷಿಗಳಿಗೆ ಶೀಘ್ರವೇ ಕಠಿಣ ಶಿಕ್ಷೆ ವಿಧಿಸಬೇಕೆಂದು  ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com