ಹಲವು ರಾಜಧಾನಿ ಎಕ್ಸ್ ಪ್ರೆಸ್, ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ವೇಳಾಪಟ್ಟಿ ಬದಲಾವಣೆಯಾಗಿದ್ದು, ಡಿ.1 ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬಂದಿದೆ.
ವೆಸ್ಟ್ರನ್ ರೈಲ್ವೆ ಸಹ ವಿಶೇಷ ರೈಲು ಹಾಗೂ ಹಬ್ಬದ ಋತುವಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವಿಶೇಷ ರೈಲುಗಳನ್ನು ವಿಸ್ತರಿಸಲಾಗಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಮುಂಬೈ ನಿಂದ ಸಂಚರಿಸುತ್ತಿದ್ದ ರಾಜಧಾನಿ ಹಾಗೂ ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಮುಂಬೈ ಸೆಂಟ್ರಲ್ ನಿಂದ ಸಂಚರಿಸುತ್ತಿದ್ದ ನವದೆಹಲಿ ರಾಜಧಾನಿ ರೈಲು ಮಂಗಳವಾರದಿಂದ ಬೋರಿವಾಲಿಯಲ್ಲಿ ನಿಲುಗಡೆಯಾಗಲಿದೆ. ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ ಪ್ರೆಸ್ ರೈಲು ಅಂಧೇರಿ ಠಾಣೆಯಲ್ಲಿ ನಿಲುಗಡೆಯಾಗುವುದಿಲ್ಲ
Advertisement