ರೈತರ ಪ್ರತಿಭಟನೆ: ಐಆರ್ ಸಿಟಿಸಿಯಿಂದ 2 ಕೋಟಿ ಇ-ಮೇಲ್!

ಕೃಷಿಗೆ ಸಂಬಂಧಿಸಿದ 3 ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಪ್ರಾಂತ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಐಆರ್ ಸಿಟಿಸಿ ಡಿ.8-12 ವರೆಗೆ ತನ್ನ ಗ್ರಾಹಕರಿಗೆ ಬರೊಬ್ಬರಿ 2 ಕೋಟಿ ಮೇಲ್ ಕಳಿಸಿದೆ. 
ರೈತರ ಪ್ರತಿಭಟನೆ: ಐಆರ್ ಸಿಟಿಸಿಯಿಂದ 2 ಕೋಟಿ ಇ-ಮೇಲ್!
ರೈತರ ಪ್ರತಿಭಟನೆ: ಐಆರ್ ಸಿಟಿಸಿಯಿಂದ 2 ಕೋಟಿ ಇ-ಮೇಲ್!
Updated on

ನವದೆಹಲಿ: ಕೃಷಿಗೆ ಸಂಬಂಧಿಸಿದ 3 ಕಾನೂನುಗಳನ್ನು ವಿರೋಧಿಸಿ ಪಂಜಾಬ್ ಪ್ರಾಂತ್ಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಐಆರ್ ಸಿಟಿಸಿ ಡಿ.8-12 ವರೆಗೆ ತನ್ನ ಗ್ರಾಹಕರಿಗೆ ಬರೊಬ್ಬರಿ 2 ಕೋಟಿ ಮೇಲ್ ಕಳಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಸಿಖ್ ಸಮುದಾಯಕ್ಕೆ ಬೆಂಬಲವಾಗಿ ಏನೆಲ್ಲಾ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಇ-ಮೇಲ್ ನಲ್ಲಿ ತಿಳಿಸುವ ಪ್ರಯತ್ನ ಮಾಡಿದೆ.

ಸಿಖ್ ಸಮುದಾಯದೆಡೆಗೆ ಪ್ರಧಾನಿ ನರೇಂದ್ರ ಮೋದಿ ಹಾಗು ಅವರ ಸರ್ಕಾರದ ವಿಶೇಷ ನಂಟು ಎಂಬ ಶೀರ್ಷಿಕೆಯಡಿ 47 ಪುಟಗಳ ಬುಕ್ ಲೆಟ್ ನ್ನು ಇ-ಮೇಲ್ ಗಳ ಮೂಲಕ ಸಾರ್ವಜನಿಕ ಹಿತಾಸಕ್ತಿಗಾಗಿ ಕಾಯ್ದೆಗಳ ಸಂಬಂಧ ನೈಜಾಂಶವನ್ನು ಅರಿಯುವಂತೆ ಮಾಡುವುದಕ್ಕೆ ಕಳಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಬುಕ್ ಲೆಟ್ ಗಳನ್ನು ಹಿಂದಿ, ಇಂಗ್ಲೀಷ್, ಪಂಜಾಬಿ ಭಾಷೆಗಳಲ್ಲಿ ತಯಾರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com