ದೆಹಲಿಯಲ್ಲಿ ಎನ್‌ಐಎ ಕಾರ್ಯಾಚರಣೆ: ಸೈಪ್ರಸ್ ನಿಂದ ಗಡಿಪಾರಾಗಿ ಬಂದ ಖಲಿಸ್ತಾನಿ ಉಗ್ರನ ಬಂಧನ

ಖಲಿಸ್ತಾನ್ ಪ್ರತ್ಯೇಕರಾಜ್ಯಕ್ಕಾಗಿ ಭಾರತದಲ್ಲಿ ಸಿಖ್ ಉಗ್ರವಾದವನ್ನು ಪುನರುಜ್ಜೀವನಗೊಳಿಸಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಸೈಪ್ರಸ್ ನಿಂದ ಗಡಿಪಾರು ಮಾಡಲ್ಪಟ್ಟ ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜರ್ ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಬಂಧಿಸಿದೆ.
ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜರ್
ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜರ್
Updated on

ನವದೆಹಲಿ: ಖಲಿಸ್ತಾನ್ ಪ್ರತ್ಯೇಕರಾಜ್ಯಕ್ಕಾಗಿ ಭಾರತದಲ್ಲಿ ಸಿಖ್ ಉಗ್ರವಾದವನ್ನು ಪುನರುಜ್ಜೀವನಗೊಳಿಸಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಸೈಪ್ರಸ್ ನಿಂದ ಗಡಿಪಾರು ಮಾಡಲ್ಪಟ್ಟ ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜರ್ ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲಿಎನ್ಐಎ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪಿ ಗುರ್ಜೀತ್ ಸಿಂಗ್ ವಿರುದ್ಧ ಪ್ರಧಾನ ತನಿಖಾ ಸಂಸ್ಥೆ ಎನ್ಐಎ ಕಳೆದ ಜನವರಿಯಲ್ಲಿ ಪ್ರಕರಣ ದಾಖಲಿಸಿತ್ತು.

ಗುರ್ಜೀತ್ ಸಿಂಗ್ ಮುಖ್ಯ ಆರೋಪಿಯಾಗಿದ್ದು ಇವನೊಂದಿಗೆ ಹರ್ಷಲ್ ಮತ್ತು ಮೊಯಿನ್ ಖಾನ್ ಎಂಬಿಬ್ಬರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗುವ ಮೂಲಕ ಖಲಿಸ್ತಾನ್ ಪ್ರತ್ಯೇಕ ರಾಜ್ಯ ರಚನೆಯ ಅಂತಿಮ ಗುರಿಯೊಂದಿಗೆ ಸಿಖ್ ಉಗ್ರವಾದವನ್ನು ಪುನರುಜ್ಜೀವನಗೊಳಿಸುವ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಕ್ತಾರರು ತಿಳಿಸಿದ್ದಾರೆ. 

ಪಿತೂರಿಯ ಭಾಗವಾಗಿ, ಮೂವರು 1984 ರ ಆಪರೇಷನ್ ಬ್ಲೂ ಸ್ಟಾರ್, ಖಲಿಸ್ತಾನಿ ಪರ ಹುದ್ದೆಗಳಿಗೆ ಸಂಬಂಧಿಸಿದ ಪ್ರಚೋದನಾಕಾರಿ ವೀಡಿಯೊಗಳು ಮತ್ತು ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. ನಿಷೇಧಿತ ಸಂಸ್ಥೆ, ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್ (ಬಿಕೆಐ), ಸಮಾನ ಮನಸ್ಕ ಸಿಖ್ ಯುವಕರು ಮತ್ತು ಇತರರನ್ನು ಖಲಿಸ್ತಾನ್ ಚಳವಳಿಯಲ್ಲಿ ಸೇರಲು ಪ್ರೇರೇಪಿಸುವ ಏಕೈಕ ಉದ್ದೇಶದಿಂದ ಅವರು ಈ ಕೃತ್ಯ ನಡೆಸಿದ್ದರೆಂದು ಅಧಿಕಾರಿ ಹೇಳಿದ್ದಾರೆ. "ಭಾರತದಲ್ಲಿ ಮುಸ್ಲಿಮರು ಮತ್ತು ಸಿಖ್ಖರ ವಿರುದ್ಧದ ದೌರ್ಜನ್ಯದ ಬಗ್ಗೆ ಚರ್ಚಿಸುವ ಮೂಲಕ ಮತ್ತು ಪ್ರತ್ಯೇಕ ಖಲಿಸ್ತಾನ್ ರಾಜ್ಯಕ್ಕಾಗಿ ನಿಜ್ಜರ್ ಮೊಯಿನ್ ಗೆ ಪ್ರೇರಣೆ ನೀಡಿದ್ದನು"

ಕಳೆದ ವರ್ಷ ಮೇ ತಿಂಗಳಲ್ಲಿ ಎನ್‌ಐಎ ವಿಶೇಷ ಎನ್‌ಐಎ ನ್ಯಾಯಾಲಯದಲ್ಲಿ ನಿಜ್ಜರ್, ಹರ್ಷಲ್ , ಮೊಯಿನ್ ಮತ್ತು ಸುಂದರ್ ಲಾಲ್ ಪರಾಶರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪಂಜಾಬ್‌ನ ಅಮೃತಸರ ಮೂಲದ ಗುರ್ಜೀತ್ ಸಿಂಗ್ 2017 ರ ಅಕ್ಟೋಬರ್‌ನಲ್ಲಿ ಸೈಪ್ರಸ್‌ ಗೆ ಪಲಾಯನ ಮಾಡಿದ್ದನು. ಆತನ ವಿರುದ್ಧ ಲುಕ್ ಔಟ್  ಸರ್ಕ್ಯುಲರ್ (ಎಲ್‌ಒಸಿ) ಹೊರಡಿಸಲಾಗಿತ್ತು.ಇದೀಗ ಹೆಚ್ಚಿನ ತನಿಖೆಗಾಗಿ ಅವನನ್ನು ಮುಂಬೈಗೆ ಕರೆದೊಯ್ಯಲು ಅವರ ಟ್ರಾನ್ಸ್ಪೋರ್ಟ್ ಕಸ್ಟಡಿ ಪಡೆಯಲಾಗುವುದು ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com