ಹಂದಿ ಜ್ವರದಿಂದ ಬಳಲುತ್ತಿರುವ ಸುಪ್ರೀಂ ಕೋರ್ಟ್ ನ 6 ನ್ಯಾಯಾಧೀಶರು: ಮುಖವಾಡ ಧರಿಸಿ ಕೋರ್ಟ್ ಗೆ ಬಂದ ವಕೀಲರು 

ಸುಪ್ರೀಂ ಕೋರ್ಟ್ ನ ಆರು ನ್ಯಾಯಾಧೀಶರು ಹಂದಿ ಜ್ವರದಿಂದ ಬಳಲುತ್ತಿದ್ದು ನ್ಯಾಯಾಲಯದ ಕಲಾಪಗಳಿಗೆ ಹಾಜರಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಂದಿ ಜ್ವರದಿಂದ ಬಳಲುತ್ತಿರುವ ಸುಪ್ರೀಂ ಕೋರ್ಟ್ ನ 6 ನ್ಯಾಯಾಧೀಶರು: ಮುಖವಾಡ ಧರಿಸಿ ಕೋರ್ಟ್ ಗೆ ಬಂದ ವಕೀಲರು 
Updated on

ನವದೆಹಲಿ:ಸುಪ್ರೀಂ ಕೋರ್ಟ್ ನ ಆರು ನ್ಯಾಯಾಧೀಶರು ಹಂದಿ ಜ್ವರದಿಂದ ಬಳಲುತ್ತಿದ್ದು ನ್ಯಾಯಾಲಯದ ಕಲಾಪಗಳಿಗೆ ಹಾಜರಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಆರು ಮಂದಿ ಸಹೋದ್ಯೋಗಿಗಳಿಗೆ ಹೆಚ್ 1ಎನ್ 1 ವೈರಸ್ ತಗುಲಿರುವ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರೊಂದಿಗೆ ಸಭೆ ನಡೆಸಿ ಪರಾಮರ್ಶಿಲಾಗುವುದು ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ,


ಮುಖವಾಡ ಧರಿಸಿ ಬಂದ ನ್ಯಾಯಾಧೀಶರು: ಆರು ಮಂದಿ ನ್ಯಾಯಾಧೀಶರಿಗೆ ಹಂದಿಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಂದು ಕೋರ್ಟ್ ಗೆ ಉಳಿದ ನ್ಯಾಯಾಧೀಶರು ಮುಖವಾಡ ಧರಿಸಿಕೊಂಡು ಬಂದಿದ್ದು ಕಂಡುಬಂತು. ಉಳಿದ ನ್ಯಾಯಾಧೀಶರಿಗೆ ಸೋಂಕು ಕಾಣಿಸಿಕೊಳ್ಳದಂತೆ ಸುಪ್ರೀಂ ಕೋರ್ಚ್ ನಲ್ಲಿ ಚುಚ್ಚುಮದ್ದು ಸಿಗುವ ಸೌಕರ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು. 

ಈ ಸೋಂಕಿನ ವಿರುದ್ಧ ರಕ್ಷಣಾತ್ಮಕ ಕ್ರಮಗಳನ್ನು ನ್ಯಾಯಾಧೀಶರು, ವಕೀಲರು, ವಕೀಲರ ಸಂಘದವರು ತೆಗೆದುಕೊಳ್ಳಬೇಕೆಂದು ಹೇಳಿದರು. ಹಂದಿ ಜ್ವರ ಕಾಣಿಸಿಕೊಂಡ ನ್ಯಾಯಾಧೀಶರಲ್ಲಿ ಇಬ್ಬರು ಶಬರಿಮಲೆ ತೀರ್ಪು ಕೇಸಿನ ವಿಚಾರಣೆಯಲ್ಲಿದ್ದು ಅವರು ರಜೆಯಲ್ಲಿರುವುದರಿಂದ ವಿಚಾರಣೆ ವಿಳಂಬವಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com